ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಗೃಹಜ್ಯೋತಿ ಗ್ಯಾರೆಂಟಿ ನೋಂದಣಿ ಪ್ರಕ್ರಿಯೆ ಕಳೆದ ತಿಂಗಳಿನಿಂದಲೇ ನಡೆದಿದೆ. ಆಗಸ್ಟ್ ನಿಂದ ಉಚಿತ 200 ಯುನಿಟ್ ವಿದ್ಯುತ್ ಸಿಗಲಿದೆ. ಈ ಯೋಜನೆಗೆ ಆಗಸ್ಟ್ 5ರಂದು ಚಾಲನೆ ಸಿಗಲಿದೆ. ಈ ಕುರಿತು ಮಾತನಾಡಲು ಇಂಧನ ಸಚಿವ ಕೆ.ಜೆ ಜಾರ್ಜ್ ಇಂದು ಮುಂಜಾನೆ 11.30ಕ್ಕೆ ಮಾಧ್ಯಮಗೋಷ್ಠಿ ಕರೆದಿದ್ದಾರೆ.
ಈ ಯೋಜನೆಗೆ ಸಂಬಂಧಿಸಿದಂತೆ ಜನರಲ್ಲಿ ಸಾಕಷ್ಟು ಗೊಂದಲಗಳಿವೆ. ಮನೆ ಮಾಲೀಕರು, ಬಾಡಿಗೆದಾರರು, ಹಿಂದಿನ ವಾರ್ಷಿಕ ವಿದ್ಯುತ್ ಬಳಕೆಯ ಆಧಾರದ ಮೇಲೆ ಉಚಿತ ನೀಡುವುದು, ಆದಾಯ ತೆರಿಗೆದಾರರಿಗೆ ಉಚಿತ ವಿದ್ಯುತ್ ಇಲ್ಲ ಸೇರಿದಂತೆ ಹಲವು ಪ್ರಶ್ನೆಗಳು ಜನರಲ್ಲಿವೆ. ಇದಕ್ಕೆ ಇಂಧನ ಸಚಿವರು ಇಂದು ಉತ್ತರ ನೀಡುತ್ತಾರಾ ಅನ್ನೋದು ತಿಳಿಯಲಿದೆ.
ಇನ್ನು ಕಾರ್ಯಕ್ರಮ ಉದ್ಘಾಟನೆಗೆ ಸಂಬಂಧಿಸಿದಂತೆ ಒಂದಿಷ್ಟು ಮಾಹಿತಿ ನೀಡಲಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಟಿಕೆಟ್ ನೋಡಿ ಸಂಭ್ರಮಿಸಿದ್ದರು. ರಾಜ್ಯದ ತುಂಬಾ ಪ್ರವಾಸ ನಡೆಸಿದ್ದಾರೆ. ಇನ್ನು ಶೂನ್ಯ ವಿದ್ಯುತ್ ಬಿಲ್ ಹೇಗಿರಲಿದೆ ಎಂದು ನೋಡಲು ಗ್ರಾಹಕರು ಕಾಯುತ್ತಿದ್ದಾರೆ. ಆದರೆ, ಉಚಿತ ಎಂದು ಹೆಚ್ಚಿಗೆ ವಿದ್ಯುತ್ ಉಪಯೋಗಿಸಿದರೆ ಭಾರೀ ಬೆಲೆ ತೆರಬೇಕಾಗುವುದು ಮಾತ್ರ ಸತ್ಯ.