ದೇವರ ಹಿಪ್ಪರಗಿ: ಪಟ್ಟಣದ ಗಂಡು ಮಕ್ಕಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಆರೋಗ್ಯ ಇಲಾಖೆಯ ವತಿಯಿಂದ ಕರೋನಾ ರೋಗದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಹಿರಿಯ ಆರೋಗ್ಯ ಸಹಾಯಕ ಅಧಿಕಾರಿಗಳಾದ ಬಿ.ಎಸ್ ಡಿಗ್ಗಿ ಮಾತ್ನಾಡಿ, ಕರೋನಾ ಮಾರಣಾಂತಿಕ ಕಾಯಿಲೆಯಾಗಿದೆ. ಇದನ್ನ ತಡೆಗಟ್ಟುವ ಸಲುವಾಗಿ ಆರೋಗ್ಯ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ರೋಗ ಬರದಂತೆ ನಾವು ವೈಯಕ್ತಿವಾಗಿ ಸ್ವಚ್ಛತೆಯಿಂದ ಇರಬೇಕು ಎಂದರು. ಎಲ್ಲೆಂದರಲ್ಲಿ ಉಗುಳುವುದ್ರಿಂದ ಹಾಗೂ ಕೆಮ್ಮುವುದ್ರಿಂದ ಕಾಯಿಲೆ ಗಾಳಿಯ ಮುಖಾಂತರ ಹರಡುತ್ತದೆ. ಹಾಗಾಗಿ ನಾವು ಕರವಸ್ತ್ರ ಬಳಸಬೇಕು ಅಂತಾ ಸಲಹೆ ನೀಡಿದ್ರು.
ಈ ವೇಳೆ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಡಿ.ಜಿ.ಪಾಟೀಲ ಹಾಗೂ ಶಾಲೆಯ ಮುಖ್ಯೋಪಾಧ್ಯಾಯ ಎಸ್.ಐ. ರಾಂಪೂರಕರ, ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.