ಪ್ರಜಾಸ್ತ್ರ ಸುದ್ದಿ
ದೇವರಹಿಪ್ಪರಗಿ: ತಾಲೂಕಿನ ಹಿಟ್ನಳ್ಳಿ ತಾಂಡಾದ ನಿವಾಸಿ ಸಾವಿತ್ರಿ ಸುನೀಲ ನಾಯಿಕ(22) ಅನ್ನೋ ಮಹಿಳೆ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಮಗಳ ಸಾವಿಗೆ ಗಂಡನ ಮನೆಯವರು ಕಾರಣವೆಂದು ಮೃತ ಸಾವಿತ್ರಿ ತಂದೆ ಶಂಕರ ಚವ್ಹಾಣ ಎಂಬುವರು ದೇವರಹಿಪ್ಪರಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮೃತ ಸಾವಿತ್ರಿಗೆ ವರದಕ್ಷಿಣೆ ವಿಚಾರದಲ್ಲಿ ಕಿರುಕುಳ ಕೊಟ್ಟಿದ್ದಾರೆ. ಮದುವೆ ಸಂದರ್ಭದಲ್ಲಿ ವರದಕ್ಷಿಣೆ ಕೊಟ್ಟಿದ್ದರೂ ಮತ್ತೆ 1 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಎಂದು ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ್ದಾರೆ. ಕತ್ತು ಹಿಸುಕಿ ಆಗಲಿ ಅಥವ ನೇಣು ಹಾಕಿ ಆಗಲಿ ಕೊಲೆ ಮಾಡಿರುವ ಶಂಕೆ ಇದೆ ಎಂದು, ಮೃತಳ ಪತಿ ಸುನೀಲ ನಾಯಿಕ, ಕಾಶಿಬಾಯಿ ನಾಯಿಕ, ಶಾಂತಾಬಾಯಿ ನಾಯಿಕ, ತುಕಾರಾಮ ನಾಯಿಕ ವಿರುದ್ಧ ದೂರು ದಾಖಲಿಸಲಾಗಿದೆ.