ವಿಜಯಪುರ: ಸಿಇಎನ್ ವಿಶೇಷ ಪೊಲೀಸ್ ಹಾಗೂ ಡಿಸಿಐಬಿ ಘಟಕ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಇಟ್ಟುಕೊಂಡಿದ್ದು ಕಂಟ್ರಿ ಪಿಸ್ತೂಲ್, ಜೀವಂತ ಗುಂಡು ಸೇರಿದಂತೆ ಮಾರಕಾಸ್ತ್ರಗಳನ್ನ ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಇಬ್ಬರನ್ನ ಬಂಧಿಸಲಾಗಿದೆ.
3 ಕಂಟ್ರಿ ಪಿಸ್ತೂಲ್, 2 ಜೀವಂತ ಗುಂಡು, 10 ಡಿಬಿಬಿಎಲ್ ಜೀವಂತ ಗುಂಡುಗಳು, ಕಬ್ಬಿಣದ 2 ಕಂಟ್ರಿ ಆಯುಧ, 3 ಮಚ್ಚು, 1 ಚಾಕು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಇಂಡಿಯ ಬರಗುಡಿ ನಿವಾಸಿ 25 ವರ್ಷದ ಸುಧೀರ ಕಾಮಣ್ಣ ಹಾಗೂ ಬಬಲೇಶ್ವರದ ಉಪ್ಪಲದಿನ್ನಿ ನಿವಾಸಿ 40 ವರ್ಷದ ಹಣಮಂತ ಹಳ್ಳಿ ಎಂಬುವರನ್ನ ಬಂಧಿಸಲಾಗಿದೆ.
ಬಂಧಿತರ ಬಳಿ ಒಟ್ಟು 77 ಸಾವಿರ ಮೌಲ್ಯದ ಅಕ್ರಮ ಕಂಟ್ರಿ ಪಿಸ್ತೂಲ್, ಗುಂಡುಗಳು ಜಪ್ತಿ ಮಾಡಲಾಗಿದೆ. ವಿಜಯಪುರ ಎಸ್ಪಿ ಅನುಪಮ ಅಗರವಾಲ್ ಮಾರ್ಗದರ್ಶದ ಮೇರೆಗೆ ದಾಳಿ ನಡೆಸಲಾಗಿದೆ. ವಿಜಯಪುರ ಅಪರಾಧ ವಿಶೇಷ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಂದರ್ಭಿಕ ಚಿತ್ರ: