ರಜನಿ ವಿರುದ್ಧದ ಅರ್ಜಿ ವಜಾ

311

ಮದ್ರಾಸ್: ಸೂಪರ್ ಸ್ಟಾರ್ ರಜನಿಕಾಂತ ವಿರುದ್ಧ ಸಲಿಕೆಯಾಗಿದ್ದ ಅರ್ಜಿಯನ್ನ ಮದ್ರಾಸ್ ಹೈಕೋರ್ಟ್ ಇಂದು ವಜಾಗೊಳಿಸಿದೆ. ವಿಚಾರವಾದಿ ಇ.ವಿ ರಾಮಸ್ವಾಮಿ ಪರಿಯಾರ್ ಕುರಿತು ನೀಡಿದ್ದ ವಿವಾದಾತ್ಮಕ ಹೇಳಿಕೆ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿಯನ್ನ ವಜಾಗೊಳಿಸಲಾಗಿದೆ.

ಅರ್ಜಿದಾರ ಅರ್ಜಿಯನ್ನ ವಾಪಸ್ ಪಡೆಯುವುದಾಗಿ ಹೇಳಿದ ಬಳಿಕ ನ್ಯಾಯಮೂರ್ತಿ ಪಿ.ರಾಜಮಾಣಿಕಂ ವಜಾಗೊಳಿಸಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅವರು, ದ್ರಾವಿಡರ್ ವಿಡದಲೈ ಪರ ವಕೀಲರನ್ನ ಕೇಸ್ ಮುಂದುವರೆಸುತ್ತೀರಾ ಹಿಂದಕ್ಕೆ ಪಡೆಯುತ್ತೀರಾ ಅಂತಾ ಕೇಳಿದ್ರು. ಹಿಂದಕ್ಕೆ ಪಡೆಯುತ್ತೇವೆ ಅಂತಾ ಹೇಳಿದ್ಮೇಲೆ ಅರ್ಜಿಯನ್ನ ವಜಾಗೊಳಿಸಿದೆ.




Leave a Reply

Your email address will not be published. Required fields are marked *

error: Content is protected !!