ಫ್ರೆಂಡ್ಶಿಪ್ ಡೇ: ಮೈಸೂರಿನ ದಿನಗಳನ್ನ ನೆನಪಿಸಿಕೊಂಡ ಯುಪಿ ಮಾಜಿ ಸಿಎಂ

434

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಆಗಸ್ಟ್ ಮೊದಲ ಭಾನುವಾರವನ್ನ ಸ್ನೇಹಿತರ ದಿನವನ್ನಾಗಿ ಭಾರತದಲ್ಲಿ ಆಚರಿಸಲಾಗ್ತಿದೆ. ಹೀಗಾಗಿ ಇಂದು ಅನೇಕರು ತಮ್ಮ ಸ್ನೇಹಿತರೊಂದಿಗೆ ಕಳೆದ ಕ್ಷಣಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು, ಕಳೆದು ಹೋದ ದಿನಗಳನ್ನು ಮೆಲಕು ಹಾಕ್ತಿದ್ದಾರೆ.

ಸ್ನೇಹಿತರ ದಿನದ ಪ್ರಯುಕ್ತ ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ ಯಾದವ ಅವರು, ತಮ್ಮ ಹಿಂದಿನ ದಿನಗಳನ್ನ ನೆನಪು ಮಾಡಿಕೊಂಡಿದ್ದಾರೆ. ಮೈಸೂರಿನ ಎಸ್ ಜೆಸಿಇ ಕಾಲೇಜಿನಲ್ಲಿ ವ್ಯಾಸಂಗ ಮಾಡ್ತಿರುವ ಸಂದರ್ಭದಲ್ಲಿ ಸ್ನೇಹಿತರೊಂದಿಗಿನ ಫೋಟೋವೊಂದನ್ನ ಟ್ವೀಟ್ ಮಾಡಿದ್ದಾರೆ. ಅದ್ಭುತ ದಿನಗಳನ್ನ ಮರಳಿ ನೆನಪಿಸಿದ್ದಕ್ಕೆ ಧನ್ಯವಾದಗಳೆಂದು ತಮ್ಮ ಸ್ನೇಹಿತನಿಗೆ ಹೇಳಿದ್ದಾರೆ.

ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ ಯಾದವ ಅವರಿಗೂ ಕರ್ನಾಟಕಕ್ಕೂ ಈ ರೀತಿಯ ಒಂದು ಸಂಬಂಧವಿದೆ.




Leave a Reply

Your email address will not be published. Required fields are marked *

error: Content is protected !!