ಮೈಸೂರು: ಕೋವಿಡ್ 19 ಭೀತಿಯ ಹಿನ್ನೆಲೆಯಲ್ಲಿ ಬಹುತೇಕ ಕರ್ನಾಟಕ ಸ್ತಬ್ಧವಾಗಿದೆ. ಎಲ್ಲ ವ್ಯಾಪಾರ, ವಹಿವಾಟು ಕುಸಿದಿದೆ. ಗುಂಪು ಗುಂಪಾಗಿ ಜನರು ಓಡಾಡುವುದು ಕಡಿಮೆಯಾಗಿದೆ. ಹೀಗಾಗಿ ಎಲ್ಲರಿಗೂ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ. ಮೈಸೂರು ಜಿಲ್ಲಾಧಿಕಾರಿ ಪತ್ರಕರ್ತರಿಗೂ ಸೂಚನೆ ನೀಡಿದ್ದಾರೆ.
ಕರೋನಾ ಸೋಂಕಿತರ ಸಂದರ್ಶನ ಮಾಡಿದ ಪತ್ರಕರ್ತರನ್ನ 14 ದಿನಗಳ ಕಾಲ ಗೃಹಬಂಧನದಲ್ಲಿ ಇಡಲಾಗುವುದು ಎಂದು ಸೂಚಿಸಿದ್ದಾರೆ. ಹೀಗಾಗಿ ಯಾರೂ ಈ ರೀತಿಯ ಕಾರ್ಯಕ್ಕೆ ಮುಂದಾಗಬೇಡಿ. ಸಾರ್ವಜನಿಕ ಮಾಹಿತಿಗಾಗಿ ನಾವೇ ಮಾಹಿತಿಯನ್ನ ನೀಡುತ್ತೇವೆ. ಅನಧಿಕೃತವಾಗಿ ಸಿಗುವ ಮಾಹಿತಿ ಪಡೆದು ಸುದ್ದಿ ಮಾಡ್ಬೇಡಿ ಎಂದು ಜಿಲ್ಲಾಧಿಕಾರಿ ಮನವಿ ಮಾಡಿಕೊಂಡಿದ್ದಾರೆ.