ಪ್ರಜಾಸ್ತ್ರ ಸುದ್ದಿ
ಉಡುಪಿ: ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸುವವರು ಕಡ್ಡಾಯವಾಗಿ ಹೋಂ ಕ್ವಾರಂಟೈನ್ ಆಗಬೇಕು. ಅವರಿಗೆ ಇನ್ಮುಂದೆ ಸಂಸ್ಥಾ ಕ್ವಾರಂಟೈನ್ ಇಲ್ಲವೆಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. ಮಣಿಪಾಲ ಡಿಸಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತ್ನಾಡಿದ್ರು.
ಮಹಾರಾಷ್ಟ್ರದಿಂದ ಬರುವವರ ಮನೆಯನ್ನೇ 14 ದಿನಗಳ ಕಾಲ ಸೀಲ್ ಡೌನ್ ಮಾಡಲಾಗುತ್ತೆ. ಆ ಮನೆಯಿಂದ ಯಾರೂ ಆಚೆ ಬರುವಂತಿಲ್ಲ. ಬಂದವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಸೀಲ್ ಡೌನ್ ಆದ ಮನೆಯ ಬಗ್ಗೆ ನಿಗಾ ವಹಿಸಲು ಆಶಾ ಕಾರ್ಯಕರ್ತೆಯರನ್ನ ನಿಯೋಜಿಸಲಾಗುತ್ತೆ. ಪೊಲೀಸ್ರು ಹಾಗೂ ಹೋಂ ಗಾರ್ಡ್ ಸಹಾಯ ಸಹ ಪಡೆಯಬಹುದಾಗಿದೆ ಎಂದು ಸಚಿವ ಶ್ರೀರಾಮುಲು ತಿಳಿಸಿದ್ದಾರೆ.