ಕೋಳಿಯಿಂದ ಕರೋನಾ ವದಂತಿ: ಪಶುವೈದ್ಯ ಇಲಾಖೆ ಹೇಳಿದ್ದೇನು?

376

ವಿಜಯಪುರ: ಕೋಳಿಯಿಂದ ಕರೋನಾ ವೈರಸ್ ಹರಡುತ್ತದೆ ಅನ್ನೋ ವದಂತಿ ಹಬ್ಬಿರುವುದ್ರಿಂದ ಕುಕ್ಕುಟ ಉದ್ಯಮದ ಮೇಲೆ ಭಾರಿ ಹೊಡೆತ ಬಿದ್ದಿದೆ. ಅಲ್ದೇ, ರಾಜ್ಯದ ಹಲವು ಭಾಗಗಳಲ್ಲಿ ಕೋಳಿ ಫಾರಂ ಮಾಲೀಕರು ಗುಂಡಿ ತೋಡಿ ಸಾವಿರಾರು ಕೋಳಿಗಳನ್ನ ಮುಚ್ಚುತ್ತಿದ್ದಾರೆ.

ವಿಜಯಪುರ ಜಿಲ್ಲೆಯ ಬಬಲೇಶ್ವರದ ಯಕ್ಕುಂಡಿಯಲ್ಲಿ ಇಂದು ಕೋಳಿಗಳ ಮಾರಣಹೋಮ ನಡೆಸಲಾಗಿದೆ. ಸುಮಾರು 2, 500 ಕೋಳಿಗಳನ್ನ ಗುಂಡಿ ತೆಗೆದು ಮುಚ್ಚಲಾಗಿದೆ. ಈ ಬಗ್ಗೆ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆ ಹೊರಡಿಸಿದ್ದು, ಕೋಳಿಯಿಂದ ಕರೋನಾ ವೈರಸ್ ಬರುವುದಿಲ್ಲ. ಯಾವುದೇ ಸುಳ್ಳು ವದಂತಿಗೆ ಕಿವಿ ಕೊಡಬೇಡಿ ಎಂದು ಸ್ಪಷ್ಟ ಪಡಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!