ವೀಕೆಂಡ್ ಕರ್ಫ್ಯೂ ಕ್ಯಾರೆ ಅನ್ನದ ಜನ

597

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಓಮಿಕ್ರಾನ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿಗೆ ತರಲಾಗಿದೆ. ಆದರೆ, ಜನರು ಇದಕ್ಕೆ ಕ್ಯಾರೆ ಅಂತಿಲ್ಲ. ಎಂದಿನಂತೆ ಜನಜೀವನ ನಡೆಯುತ್ತಿದೆ.

ಅನುಮತಿ ನೀಡದ ಅಂಗಡಿಗಳು ಮುಚ್ಚಿದಂತೆ ಕಂಡರೂ ಯಾವುದೂ ಮುಚ್ಚಿಲ್ಲ. ಪೊಲೀಸರ ವಾಹನದ ಸೈರನ್ ಗೆ ಬಾಗಿಲು ಮುಚ್ಚುತ್ತಾರೆ. ಅವರು ಮರೆಯಾಗುತ್ತಿದ್ದಂತೆ ಮತ್ತೆ ಬಾಗಿಲು ತೆಗೆದು ವ್ಯಾಪಾರ ಮಾಡುತ್ತಿದ್ದಾರೆ.

ಜನರನ್ನು ಎಷ್ಟೊಂದು ಒತ್ತಾಯದಿಂದ ಬಂದ್ ಮಾಡಿಸಲು ಸಾಧ್ಯ. ಎರಡು ವರ್ಷಗಳಿಂದ ಅವರಿಗೂ ನೋಡಿ ನೋಡಿ ಸಾಕಾಗಿದೆ. ಹೀಗಾಗಿ ಸರ್ಕಾರ ಏನೇ ಹೇಳಿದರೂ ಕೇಳುತ್ತಿಲ್ಲ. ಕೇಳಿದಂತೆ ಮಾಡುತ್ತಿದ್ದಾರೆ. ಇದು ದಿನಗೂಲಿ ನಂಬಿ ಜೀವನ ಮಾಡುವವರಿಗೆ ದೊಡ್ಡ ಹೊಡೆತ ಬಿದ್ದಿದೆ. ಕರ್ಫ್ಯೂ ಹೆಸರಲ್ಲಿ ಕಳ್ಳದಂಧೆ ಮಾಡುವವರಿಗೆ ವರವಾಗಿದೆ.




Leave a Reply

Your email address will not be published. Required fields are marked *

error: Content is protected !!