ಅಥಣಿ: ಬೆಳಗಾವಿಯಲ್ಲಿ ಕರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ತಾಲೂಕಿಗೂ ವ್ಯಾಪಿಸಿದ್ದು, ಅಥಣಿ ತಾಲೂಕಿನಲ್ಲಿ ಮೊದಲ ಪ್ರಕರಣ ದಾಖಲಾಗಿದೆ.
ತಾಲೂಕಿನ ಕೊಕಟನೂರ ಗ್ರಾಮದ ವ್ಯಕ್ತಿ ಅಜ್ಮಿರ ಪ್ರವಾಸ ಮುಗಿಸಿ, ಬೆಳಗಾವಿ ಜಿಲ್ಲೆಯ ಗಡಿ ಪ್ರವೇಶ ಮಾಡಿದ ವೇಳೆ ನಿಪ್ಪಾಣಿಯಲ್ಲಿ ಪೋಲಿಸರು ತಡೆದು ಹೋಮ್ ಕ್ವಾರಂಟೈನ್ ಮಾಡಿದ್ರು. ಈ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದು, ತಾಲೂಕಿನ ಮೊದಲ ಪ್ರಕರಣವಾಗಿದೆ. ಇದ್ರಿಂದಾಗಿ ತಾಲೂಕಿನ ಜನರಲ್ಲಿ ಆತಂಕ ಮೂಡಿದೆ.
ತಾಲೂಕು ವೈದ್ಯಾಧಿಕಾರಿ ಮುತ್ತಣ ಕೊಪ್ಪದ ಮಾತ್ನಾಡಿ, ಸೋಂಕಿತ ಅಥಣಿ ತಾಲೂಕಿನ ಯುವಕ . ಆದರೆ ಅಥಣಿಗೂ ಈ ಪ್ರಕರಣಕ್ಕೂ ತುಳುಕು ಇಲ್ಲ. ಈ ಯುವಕನ್ನ ನಿಪ್ಪಾಣಿಯಲ್ಲಿ ಹೋಮ್ ಕ್ವಾರಂಟೈನ್ ಮಾಡಲಾಗಿತ್ತು. ಸೋಂಕು ದೃಡಪಟ್ಟಿದೆ. ಇದರಿಂದ ಅಥಣಿ ಜನತೆ ಆತಂಕ ಪಡುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಿದ್ದಾರೆ.