ಹಲಸಂಗಿಯಲ್ಲಿ ಯುವಪಡೆಯ ಸಮಾಜಸೇವೆ

605

ಚಡಚಣ: ಗ್ರಾಮೀಣ ಪ್ರದೇಶಗಳಲ್ಲಿ ಜನರು ಮಾಹಾಮಾರಿ ಕರೋನಾ ರೋಗಕ್ಕೆ ಬಲಿಯಾಗಬಾರದು ಎಂದು, ಯುವ ಭಾರತ ಹಲಸಂಗಿ ಗ್ರಾಮ ಘಟಕದ ವತಿಯಿಂದ ಗ್ರಾಮದಲ್ಲಿ ಸ್ಯಾನಟೈಸರ್ ಸಿಂಪಡಣೆ ಮಾಡಲಾಗ್ತಿದೆ. ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ಈ ಕೆಲಸ ನಡೆಯುತ್ತಿದೆ.

ಗ್ರಾಮದ ಯುವ ಪಡೆಯು ಮಾಹಾಮಾರಿ ರೋಗ ತಡೆಗಟ್ಟುವ ಸಲುವಾಗಿ ದಿನಪೂರ್ತಿ ಶ್ರಮಿಸುತ್ತಿದೆ. ಗ್ರಾಮದಲ್ಲಿ ಬೇರೆ ಯಾರಾದರೂ ಬಂದರೆ ಕೂಡಲೇ ಆಶಾಕಾರ್ತೆಯರು, ಅಂಗನವಾಡಿ ,ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆಗಳಿಗೆ ತಿಳಿಸುವ ಕೆಲಸ ಸಹ ಮಾಡ್ತಿದ್ದಾರೆ.

ಇನ್ನು ಗಡಿಭಾಗದಲ್ಲಿ ತುತ್ತು ಅನ್ನ ಇರಲಾರದೆ ಎಷ್ಟು ಕುಟುಂಬಗಳಿವೆ. ಅವರನ್ನ ಗುರುತಿಸಿ ಆ ಕುಟುಂಬಗಳಿಗೆ ಆಹಾರ ಕಿಟ್ ನೀಡಿ ಆಶ್ರಯ ನೀಡುತ್ತಿದ್ದಾರೆ. ಇದರ ಜೊತೆಗೆ ಎಲ್ಲ ಜನರಿಗೆ ರೋಗದಿಂದ ದೂರ ಇರಲು ಜಾಗೃತಿ ಮೂಡಿಸುತ್ತಿದ್ದಾರೆ. ಈ ಯುವಪಡೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ರಾಜೇಂದ್ರ ಕಲ್ಯಾಣಶೆಟ್ಟಿ, ರವಿ ಮಲ್ಲೆವಾಡಿ, ಸಿದ್ದರಾಮ ಕೊಟ್ಟಲಗಿ, ಪ್ರಭಾಕರ ಬೆಯಿಗೊಂಡ, ಮಹಾದೇವ ಬಗಲಿ ಸೇರಿ ಹಲವರಿದ್ದಾರೆ.




Leave a Reply

Your email address will not be published. Required fields are marked *

error: Content is protected !!