ಅಥಣಿಯಲ್ಲಿ ಕರೋನಾ ಜಾಗೃತಿ ಮೂಡಿಸಿದ ಪತ್ರಕರ್ತರು

317

ಅಥಣಿ: ‌ಪಟ್ಟಣದಲ್ಲಿ ಕಾರ್ಯನಿರತ ಪತ್ರಕರ್ತರು ಕರೋನಾ ವೈರಸ್ ಜಾಗೃತಿ ಮೂಡಿಸಿದ್ರು. ಹೀಗಾಘಿ ಸಾರ್ವಜನಿಕರಿಗೆ ಗುಲಾಬಿ ಕೊಟ್ಟು ಕೈ ಮುಗಿದು, ಮನೆಯಲ್ಲಿ ಇರಿಯೆಂದು ವಿನಂತಿಸುವ ಮೂಲಕ ಅರಿವು ಮೂಡಿಸಿದರು.

ಕರೋನಾದಿಂದಾಗಿ ಭಾರತ ಲಾಕ್ ಡೌನ್ ಇಂದು 9ನೇ ದಿನಕ್ಕೆ ಕಾಲಿಟ್ಟಿದ್ದು, ರಾಜ್ಯ ಸರ್ಕಾರ ಪೋಲಿಸರು ಸಾರ್ವಜನಿಕರ ಮೇಲೆ ಲಾಠಿ ಬೀಸದಂತೆ ಆದೇಶಿಸಿದ ಬೆನ್ನಲ್ಲೆ ರಸ್ತೆಯಲ್ಲಿ ಅನವಶ್ಯಕವಾಗಿ ಬೈಕ್ ಚಲಾಯಿಸುತ್ತಿದ್ದ ಸಾರ್ವಜನಿಕರನ್ನ ತಡೆದು ಮನೆಯಿಂದ ಹೊರಬರದಂತೆ ಮನವಿ ಮಾಡಿದ್ರು.

ಈ ವೇಳೆ ಅಥಣಿ ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಪ್ರಕಾಶ ಕಾಂಬಳೆ, ಖಜಾಂಚಿ ಸತೀಶ ಕೋಳಿ ಹಾಗೂ ಸದಸ್ಯರಾದ ರಮೇಶ ಬಾದವಾಡಗಿ, ಮಹಂತೇಶ ಬನಸೋಡೆ, ಪರಶುರಾಮ ಚುಬಚಿ, ರಾಕೇಶ ಮೈಗೂರ ಮತ್ತು ಮಾನವ ಹಕ್ಕು ಸಂಘಟನೆಯ ಅಬ್ದುಲ ಜಬ್ಬಾರ ಚಿಂಚಲಿ, ಸೇರಿದಂತೆ ಹಲವರು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!