ಬೆಂಗಳೂರು: ರಾಜ್ಯದಲ್ಲಿ ಕರೋನಾ ಹಾವಳಿ ದಿನಿದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಷ್ಟು ದಿನ ಸೈಲೆಂಟ್ ಆಗಿದ್ದ ಮಹಾಮಾರಿ ಇದೀಗ ದಿನದಿಂದ ದಿನಕ್ಕೆ ಏರಿಕೆಯಾಗ್ತಿದೆ. ಅದರಲ್ಲೂ ಮೈಸೂರಿನಲ್ಲಿ ಇದರ ಪ್ರಮಾಣ ಹೆಚ್ಚಾಗುತ್ತಿದೆ.
ಮೈಸೂರಿನಲ್ಲಿ 5 ಜನರಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿದೆ. ಇವರೆಲ್ಲರೂ ನಂಜನಗೂಡಿನ ಔಷಧಿ ತಯಾರಿಕಾ ಕಂಪನಿಯ ಉದ್ಯೋಗಿಗಳಾಗಿದ್ದು, ಅವರ ಕುಟುಂಸ್ಥರಾಗಿದ್ದಾರೆ. ಇದರಲ್ಲಿ 8 ವರ್ಷದ ಮಗು ಸಹ ಸೇರಿಕೊಂಡಿದೆ. ನಂಜನಗೂಡಿನ ಔಷಧಿ ತಯಾರಿಕಾ ಕಂಪನಿಯ ಉದ್ಯೋಗಿಗಳಲ್ಲಿ ಡೆಡ್ಲಿ ಕರೋನಾ ಹೆಚ್ಚಾಗಿ ಕಂಡು ಬರ್ತಿರುವುದು ಆತಂಕ ಮೂಡಿಸಿದೆ.
ಇನ್ನು ಬೆಂಗಳೂರಿನಲ್ಲಿ 4 ಹಾಗೂ ಕಲಬುರಗಿಯಲ್ಲಿ 1 ಕೇಸ್ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಇಂದು 10 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರ ಪರಿಣಾಮ ರಾಜ್ಯದಲ್ಲಿ ಕರೋನಾ ಸೋಂಕಿತರ ನಂಬರ್ ದ್ವಿಶತಕ ದಾಟಿದೆ. 207 ಜನರಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿದೆ.