ಮಂಡ್ಯದಲ್ಲಿ ಚಿರತೆ ಹಾವಳಿ: ಸ್ಥಳೀಯರಲ್ಲಿ ಆತಂಕ

423

ಮಂಡ್ಯ: ಪಾಂಡವಪುರ ತಾಲೂಕಿನ ಬೆಳ್ಳಾಳೆ ಗ್ರಾಮದಲ್ಲಿ ಚಿರತೆ ದಾಳಿ ಮಾಡಿದೆ. ನಾಯಿಯೊಂದನ್ನ ಕೊಂದು ಹಾಕಿರುವ ಚಿರತೆಯಿಂದಾಗಿ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಬೆಳ್ಳಾಳೆ ಗ್ರಾಮದ ಹೊರವಲಯದಲ್ಲಿರುವ ಜೆಡಿಎಸ್ ಮುಖಂಡ ಎಸ್.ಎ.ಮಲ್ಲೇಶ ಎಂಬುವರ ತೋಟಕ್ಕೆ ನುಗ್ಗಿರುವ ಚಿರತೆ ಸಾಕುನಾಯಿಯನ್ನ ಕೊಂದು ಹಾಕಿದೆ. ಅಲ್ದೇ, ಅದನ್ನ ಅರ್ಧಂಬರ್ಧ ತಿಂದು ಅಲ್ಲಿಯೇ ಬಿಟ್ಟು ಹೋಗಿದೆ. ಇದ್ರಿಂದಾಗಿ ಗ್ರಾಮಸ್ಥರಲ್ಲಿ ಭಯ ಮೂಡಿದೆ.

ಗ್ರಾಮದಲ್ಲಿ ಸಾಕಷ್ಟು ಜಾನುವಾರುಗಳಿದ್ದು, ಅವುಗಳನ್ನೂ ಸಹ ತಿಂದು ಹಾಕುವ ಭಯ ಕಾಡ್ತಿದೆ. ಇದರ ಜೊತೆಗೆ ಮನುಷ್ಯರ ಮೇಲೆ ದಾಳಿ ಮಾಡಿ ಏನಾದ್ರೂ ಅನಾಹುತವಾಗುವ ಮೊದ್ಲು ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮಗಳನ್ನ ತೆಗೆದುಕೊಳ್ಳಬೇಕೆಂದು ಆಗ್ರಹಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!