ಪ್ರಜಾಸ್ತ್ರ ಕ್ರೀಡಾ ಸುದ್ದಿ
ಕರೋನಾ ಹಾವಳಿ ನಡುವೆ ದೇಶದಲ್ಲಿ ಐಪಿಎಲ್ 14ನೇ ಸೀಸನ್ ನಡೆಯುತ್ತಿದೆ. ಹೀಗಾಗಿ ಐಪಿಎಲ್ ಅಭಿಮಾನಿಗಳು ಹೊಡಿ ಬಡಿ ಆಟ ನೋಡಿಕೊಂಡು ಫುಲ್ ಎಂಜಾಯ್ ಮಾಡ್ತಿದ್ದಾರೆ. ಇದೀಗ ಕೋವಿಡ್ ಭಯಕ್ಕೆ ಕೆಲ ಆಟಗಾರರು ಮೈದಾನದಿಂದ ದೂರು ಉಳಿಯಲು ಮುಂದಾಗಿದ್ದಾರೆ.
ಯೆಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೇನ್ ರಿಚರ್ಡಸನ್ ಹಾಗೂ ಆಡ್ಯಂ ಜಂಪಾ ಆಟದಿಂದ ದೂರು ಉಳಿಯುವ ನಿರ್ಧಾರ ಮಾಡಿದ್ದಾರೆ. ಕೇನ್ ರಿಚರ್ಡಸನ್ ಒಂದು ಪಂದ್ಯವಾಡಿದ್ದಾರೆ. ಜಂಪಾ ಯಾವುದೇ ಪಂದ್ಯ ಆಡಿಲ್ಲ.
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಪೀನರ್ ರವಿಚಂದ್ರನ್ ಅಶ್ವಿನ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ಆ್ಯಂಡ್ರೋ ಟೈ ಟೂರ್ನಿಯಿಂದ ದೂರ ಉಳಿದಿದ್ದಾರೆ. ಯಾವುದೇ ಆಟಗಾರರು ಹೋದರೂ ಟೂರ್ನಿ ನಿಲ್ಲುವುದಿಲ್ಲವೆಂದು ಬಿಸಿಸಿಐ ತಿಳಿಸಿದೆ ಎಂದು ಹೇಳಲಾಗ್ತಿದೆ.