ಬೆಳಗಾವಿ: ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಸಿಆರ್ ಪಿಎಫ್ ಯೋಧನ ಬಂಧನ ಪ್ರಕರಣಕ್ಕೆ ಇದೀಗ ಅಂತ್ಯವಾಗಿದ್ದು, ಜಾಮೀನು ಸಿಕ್ಕಿದೆ. ಸಂಜೆ ಹಿಂಡಲಗಾ ಜೈಲಿನಿಂದ ಬುಡುಗಡೆ ಮಾಡಲಾಯ್ತು.
ಸಿಆರ್ ಪಿಎಫ್ ವಿಂಗ್ ಕಾಮಾಂಡೋ ಯೋಧನಿಗೆ ಚಿಕ್ಕೋಡಿ 1ನೇ ಜೆಎಂಎಫ್ ಸಿ ಕೋರ್ಟ್ ಬೆಳಗ್ಗೆ ಜಾಮೀನು ನೀಡಿದೆ. ಜಾಮೀನು ಆದೇಶದೊಂದಿಗೆ ವಕೀಲರು ಬೆಳಗಾವಿ ಹಿಂಡಲಗಾ ಜೈಲಿಗೆ ಬಂದು ಯೋಧನನ್ನ ಕರೆದುಕೊಂಡು ಹೋದ್ರು.
ಜಾಂಬೋಲಿ ಬಳಿ ಇರುವ ಸಿಆರ್ ಪಿಎಫ್ ತರಬೇತಿ ಕೇಂದ್ರಕ್ಕೆ ಸಚಿನ ಸಾವಂತನನ್ನ ಕರೆದುಕೊಂಡು ಹೋಗಲಾಗಿದೆ. ಮತ್ತೆ ಸೇವೆಗೆ ಮರಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಸಣ್ಣ ಗಲಾಟೆಯಲ್ಲಿ ಬಂಧಿಸಲಾಗಿತ್ತು.