ಮೈಸೂರು: ಸಿದ್ದರಾಮಯ್ಯನವರನ್ನ ಕಾಂಗ್ರೆಸ್ ಬಿಟ್ಟರು, ನಾವು ಅವರನ್ನ ಬಿಡುವುದಿಲ್ಲವೆಂದು ಪ್ರವಾಸೋದ್ಯಮ ಸಚಿವ ಸಿ.ಟಿ ವ್ಯಂಗ್ಯವಾಡಿದ್ದಾರೆ. ಮೈಸೂರಿನಲ್ಲಿ ಮಾಧ್ಯಮದವರ ಜೊತೆ ಮಾತ್ನಾಡಿದ ಸಚಿವರು, ದಸರಾ ಕಾರ್ಯಕ್ರಮಕ್ಕೆ ಆಹ್ವಾನಿಸಿಯೇ ಸಿದ್ಧ.
ದಿನನಿತ್ಯ ಅವರೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರನ್ನ ಸೇರಿಸಿಕೊಂಡು ದಸರಾ ಮಾಡುತ್ತೇವೆ. ಇದೇ ವೇಳೆ ಡಿಕೆಶಿ ಬಗ್ಗೆ ಮಾತ್ನಾಡಿದ ಸಿ.ಟಿ ರವಿ, ಭ್ರಷ್ಟಾಚಾರ ನಡೆಸದಿದ್ರೆ ಭಯ ಯಾಕೆ ಎಂದು ಕೇಳಿದ್ರು. ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸೋದು ತಪ್ಪಾ ಎಂದು ಪ್ರಶ್ನಿಸಿದ್ರು.