ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಸಿಲಿಂಡರ್ ಸ್ಫೋಟಗೊಂಡು ಬರೋಬ್ಬರಿ 8 ಜನರು ಮೃತಪಟ್ಟ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಮೇಡಿಹಳ್ಳಿಯಲ್ಲಿ ನಡೆದಿದೆ. ಮಾರ್ಚ್ 26ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬಿಹಾರ ಮೂಲದ ತಿಲಕ್ ರಾಮ್, ನೀರಜ್, ಸನೋಜ್, ಸುಮಯ್, ಅಮಿತ್, ಚಂದ್ರಪಾಲ್, ಲಕ್ಷ್ಮಣ್ ಹಾಗೂ ನಿಕೋನ್ ಅನ್ನೋ 8 ಜನರು ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಎಲ್ಲರೂ ನಿಧನರಾಗಿದ್ದಾರೆ.
ಇವರೆಲ್ಲ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಾರೆ. ಅಂದು ಎಲ್ಲರೂ ರೂಮಿನಲ್ಲಿ ಮಲಗಿದ್ದಾರೆ. ಗ್ಯಾಸ್ ಪೈಪ್ ಸೋರಿಕೆ ಆಗಿರುವುದು ಗೊತ್ತಿರದೆ ಇದರಲ್ಲಿ ಓರ್ವ ಸಿಗರೇಟ್ ಹಚ್ಚಲು ಬೆಂಕಿ ಹಚ್ಚಿದ್ದಾನೆ. ಆಗ ಸಿಲಿಂಡರ್ ಸ್ಫೋಟಗೊಂಡಿದೆ. ಆಗ ಎಲ್ಲರೂ ತೀವ್ರವಾಗಿ ಗಾಯಗೊಂಡಿದ್ದು. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಅವರೆಲ್ಲ ಮೃತಪಟ್ಟಿದ್ದಾರೆ.