ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ: ಈಶ್ವರಪ್ಪ

417

ಪ್ರಜಾಸ್ತ್ರ ಸುದ್ದಿ

ಶಿವಮೊಗ್ಗ: ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿನ ಪ್ರಕರಣದಲ್ಲಿ ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ. ನಾನು ಆರೋಪ ಮುಕ್ತನಾಗಿ ಬರುತ್ತೇನೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.

ಇಂದು ಸಂಜೆ ಮುಖ್ಯಮಂತ್ರಿಯನ್ನು ಭೇಟಿಯಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದಾರೆ. ಇದಕೂ ಮೊದಲು ಸಚಿವರಾಗಿ ಕೊನೆಯ ದಿನದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಈ ವೇಳೆ ಮಾತನಾಡಿದು ಅವರು, ನನ್ನ ಅನುಯಾಯಿಗಳಿಗೆ ತುಂಬಾ ನೋವಾಗಿದೆ. ಅವರಿಗೆ ಮನವರಿಕೆ ಮಾಡಿದ್ದೇನೆ. ನಾಯಕರು, ಕಾರ್ಯಕರ್ತರು, ಸ್ವಾಮೀಜಿಗಳ ಬೆಂಬಲದಿಂದ ಗೆದ್ದು ಬರುತ್ತೇನೆ ಎಂದರು.

ಶುಭಶ್ರೀ ಸಮುದಾಯ ಭವನದ ಆವರಣದಲ್ಲಿರುವ ಗಣಪತಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದರು. ಈ ವೇಳೆ ಬಲಗಡೆಯಿಂದ ಹೂ ಬಿದ್ದಿದ್ದು, ಇದು ನಮಗೆ ಶುಭ ಸೂಚನೆ. ಇದು ನಮಗೆ ಆಶ್ಚರ್ಯ ಹಾಗೂ ಸಂತೋಷವಾಗಿದೆ. ನಾನು ಸತ್ಯದ ಹಾದಿಯಲ್ಲಿದ್ದೇವೆ ಅನ್ನೋದಕ್ಕೆ ಹೂ ಬಿದ್ದಿರುವುದೇ ಸಾಕ್ಷಿ ಎಂದು ಆಶಾಭವನೆ ವ್ಯಕ್ತಪಡಿಸಿದರು.




Leave a Reply

Your email address will not be published. Required fields are marked *

error: Content is protected !!