ಪ್ರಜಾಸ್ತ್ರ ಸುದ್ದಿ
ಧಾರವಾಡ: ಮದಿಹಾಳದಲ್ಲಿ ಭಾನುವಾರ ನಡೆದ ಕೊಲೆ ಪ್ರಕರಣ ಸಂಬಂಧ ಶಹರ ಠಾಣೆ ಪೊಲೀಸ್ರು ಆರೋಪಿಯನ್ನ ಅರೆಸ್ಟ್ ಮಾಡಿದ್ದಾರೆ. ಆರೋಪಿ ರೌಡಿ ಶೀಟರ್ ಶ್ರೀಶೈಲ ಗಾಣಿಗೇರನನ್ನು ಪೊಲೀಸ್ರು ಬಂಧಿಸಿದ್ದಾರೆ.
ಶ್ರೀಶೈಲ ಹಾಗೂ ಶಿವಯೋಗಿ ಭಾವಿಕಟ್ಟಿ ಎಂಬಾತನ ನಡುವೆ ವ್ಯವಹಾರವಿತ್ತು. ಹೀಗಾಗಿ ಶಿವಯೋಗಿ ತನ್ನಿಬ್ಬರ ಸಹಚರರೊಂದಿಗೆ ಶ್ರೀಶೈಲ ಮನೆಗೆ ಹೋಗಿ ಜಗಳ ಮಾಡಿದ್ದ. ಅದು ವಿಕೋಪಕ್ಕೆ ಹೋಗ್ತದ್ದಂತೆ ಶ್ರೀಶೈಲ ಗನ್ ತೋರಿಸಿದ್ದ. ಬಳಿಕ ಶಿವಯೋಗಿ ಮೇಲೆ ಶೂಟ್ ಮಾಡಿದ್ದ ಹೀಗಾಗಿ ಆತನ ಸಾವನ್ನಪ್ಪಿದ. ಇನ್ನಿಬ್ಬರ ಮೇಲೂ ದಾಳಿ ಮಾಡಿದ್ರಿಂದ ಅವರಿಗೆ ಗಾಯಗಳಾಗಿವೆ.
ಘಟನೆ ಬಳಿಕ ಆರೋಪಿ ಅಲ್ಲಿಂದ ಎಸ್ಕೇಪ್ ಆಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸ್ರು, ಎಸಿಪಿ ಅನುಶಾ ನೇತೃತ್ವದಲ್ಲಿ ತಂಡವೊಂದು ರಚನೆ ಮಾಡಲಾಗಿತ್ತು. ಈ ಟೀಂ ಆರೋಪಿಯ ಹೆಡೆಮುರಿ ಕಟ್ಟಿದೆ. ಕೃತ್ಯ ಬಳಸಿದ್ದಿ ರಿವಾಲ್ವಾರ್ ಹಾಗೂ ಬೈಕ್ ವಶಕ್ಕೆ ಪಡೆಯಲಾಗಿದೆ.