ಪ್ರಜಾಸ್ತ್ರ ಸುದ್ದಿ
ಧಾರವಾಡ: ಇಲ್ಲಿನ ಕೆಸಿಡಿ ರಸ್ತೆಯಲ್ಲಿರುವ ಆಕಾಶವಾಣಿ ಸಿಬ್ಬಂದಿಯ ಮನೆಗಳಿಗೆ ಯಾರೋ ದುಷ್ಕರ್ಮಿಗಳು ಹೊರಗಡೆಯಿಂದ ಬೀಗ ಹಾಕಿಕೊಂಡು ಹೋಗಿದ್ದಾರೆ. ಇದರಿಂದಾಗಿ ಅಲ್ಲಿನ 10ಕ್ಕೂ ಹೆಚ್ಚು ಮನೆಯವರು ಒಳಗಡೆ ಲಾಕ್ ಆದ ಘಟನೆ ನಡೆದಿದೆ.
ಕೆಲ ಮಹಡಿಯ ಮನೆಗಳಿಗೆ ಹೀಗೆ ಮಾಡಲಾಗಿದೆ. ಅಲ್ದೇ, ಮೇಲೆ ಹೋಗದಂತೆ ಕೆಳಗಡೆಯ ಮೆಟ್ಟಲಿನ ಬಾಗಲಿಗೂ ಬೀಗ ಹಾಕಲಾಗಿದೆ. ಈ ಘಟನೆ ನಸುಕಿನ 4 ಗಂಟೆಯ ಸುಮಾರಿಗೆ ನಡೆದಿದೆ ಎನ್ನಲಾಗುತ್ತಿದೆ. ಆ ಸಮಯದಲ್ಲಿ ಲೈಟ್ ಹೋಗಿದೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಯಾಕೆ? ಹೀಗೆ ಮಾಡಿದ್ದು ಯಾರು ಅನ್ನೋದರ ತನಿಖೆ ನಡೆಯುತ್ತಿದೆ.