ರಾಜ್ಯ ಸರ್ಕಾರ ವಜಾಗೊಳಿಸಿಲು ಸಿದ್ದರಾಮಯ್ಯ ಒತ್ತಾಯ

205

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಬುದ್ದಿ ಹೇಳಿದು ಬಿಟ್ಟು, ತೆರೆಮರೆಯಲ್ಲಿ ಕಳ್ಳಾಟ ಆಡುತ್ತಿದೆ. ಹೈಕಮಾಂಡ್ ಗೆ ಬೇಕಾಗಿರುವುದು ಸರ್ಕಾರದ ಸುಭದ್ರತೆಯೋ ಮುಖ್ಯಮಂತ್ರಿಗಳ ಅಭದ್ರತೆಯೋ ಎಂಬುವುದನ್ನ ನಿರ್ಧಾರ ಮಾಡಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ರು.

ರಾಜ್ಯದಲ್ಲಿ ಸರ್ಕಾರ ಅಸ್ಥಿರಗೊಂಡಿದೆ. ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಅರಾಜಕತೆ ಏರ್ಪಟ್ಟಿದೆ. ಕೂಡಲೇ ರಾಜ್ಯಪಾಲರು ಮಧ್ಯಪ್ರವೇಶ ಮಾಡಿ ಸರ್ಕಾರವನ್ನ ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ರು.

ಸಚಿವರನ್ನ, ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಕರೋನಾ ಪರಿಸ್ಥಿತಿಯನ್ನ ಎದುರಿಸಿ ಜನರ ಹಿತ ಕಾಪಾಡಬೇಕಾದ ಸಿಎಂ, ಹೈಕಮಾಂಡ್, ಸಚಿವರು, ಶಾಸಕರ ಕೈಕಾಲು ಹಿಡಿದುಕೊಂಡು ಕುರ್ಚಿ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!