ಪ್ರಜಾಸ್ತ್ರ ಸುದ್ದಿ
ನವದೆಹಲಿ: ಸಂಸತ್ ವಿಶೇಷ ಅಧಿವೇಶನದ ಮೊದಲ ದಿನ ಮಾತನಾಡಿದ ಪ್ರಧಾನಿ ಮೋದಿ, ಭಾರತೀಯರ ಸಾಧನೆ ಬಗ್ಗೆ ಜಗತ್ತಿನಾದ್ಯಂತ ಚರ್ಚೆ ನಡೆದಿದೆ. ಹೊಸ ಸಂಕಲ್ಪದೊಂದಿಗೆ ನೂತನ ಸಂಸತ್ ಭವನಕ್ಕೆ ಹೋಗುತ್ತಿದ್ದೇವೆ. ನಮ್ಮ ಈ ಶಕ್ತಿಗೆ ವಿಶ್ವವೇ ನಿಬ್ಬೆರಗಾಗಿದೆ ಎಂದರು.
ಹಳೆಯ ಸಂಸತ್ ಭವನದಲ್ಲಿ ಇದು ಕೊನೆಯ ಅಧಿವೇಶನವಾಗಿದ್ದು, ಐತಿಹಾಸಿಕವಾಗಿರಲಿದೆ. ಇದು ಮುಂದಿನ ಜನಾಂಗಕ್ಕೆ ಸ್ಪೂರ್ತಿ ನೀಡುತ್ತೆ. ಇದರೊಂದಿಗೆ ನಮ್ಮ ಹಲವು ಸಿಹಿ, ಕಹಿ ನೆನಪುಗಳಿವೆ. ಈ ಕಟ್ಟಡಕ್ಕೆ ನಾನು ಮೊದಲ ಬಾರಿಗೆ ಪ್ರವೇಶ ಮಾಡಿದಾಗ ಜನರಿಂದ ಇಷ್ಟೊಂದು ಪ್ರೀತಿ ಪಡೆಯುತ್ತೇನೆ ಎಂದು ಊಹಿಸಿರಲಿಲ್ಲ ಅಂತಾ ಹೇಳಿದರು.
ಈ ಸಂದರ್ಭದಲ್ಲಿ ಚಂದ್ರಯಾನ-3 ಯಶಸ್ವಿಗೊಳಿಸಿದ ನಮ್ಮ ವಿಜ್ಞಾನಿಗಳಿಗೆ ಮತ್ತೊಮ್ಮೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಕಟ್ಟಡವನ್ನು ವಿದೇಶಿಗರು ನಿರ್ಮಿಸಿದರೂ ಇದರ ಹಿಂದೆ ಇರುವುದು ನಮ್ಮ ದೇಶದ ಹಣ, ಕಾರ್ಮಿಕರು ಅನ್ನೋ ಹೆಮ್ಮೆ ಇದೆ ಎಂದರು. ಮಂಗಳವಾರದಿಂದ ನೂತನ ಸಂಸತ್ ಭವನದಲ್ಲಿ ವಿಶೇಷ ಅಧಿವೇಶನ ಹಾಗೂ ಮುಂದಿನ ಎಲ್ಲ ಅಧಿವೇಶನಗಳು ನಡೆಯಲಿವೆ.