ರಾಷ್ಟ್ರೀಯ ಪಕ್ಷಗಳಿಂದ ಸಂಪತ್ತು ಲೂಟಿ: ಹೆಚ್ಡಿಕೆ

222

ಪ್ರಜಾಸ್ತ್ರ ಸುದ್ದಿ

ಕೆ.ಆರ್ ಪೇಟೆ: ರಾಜ್ಯದಲ್ಲಿ ಬಿಜೆಪಿ ನಾಯಕತ್ವದ ಸಮಸ್ಯೆ ಬಗ್ಗೆ ಎದ್ದಿರುವ ಅಸಮಾಧಾನಕ್ಕೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆ ನಡೆಯುತ್ತಿವೆ. ಈ ಬಗ್ಗೆ ಮಾತ್ನಾಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ ಸಿಂಗ್ ಕರ್ನಾಟಕ್ಕೆ ಬಂದಿರುವುದು ಸಮಸ್ಯೆ ನಿವಾರಣೆಗಾಗಿ ಅಲ್ಲ. ಅದು ಅವರಿಗೆ ಬೇಕಾಗಿಯೂ ಇಲ್ಲವೆಂದು ಹೇಳಿದ್ದಾರೆ.

ರಾಷ್ಟ್ರೀಯ ಪಕ್ಷಗಳು ರಾಜ್ಯದ ಸಂಪತ್ತು ಲೂಟಿ ಮಾಡುತ್ತಿವೆ. ಜನರು ಎಚ್ಚೆತ್ತುಕೊಳ್ಳಬೇಕು ಎಂದರು. ಇನ್ನು ಬಿಎಸ್ವೈ ವಿರುದ್ಧ ಕಿಡಿ ಕಾರಿರುವ ಹೆಚ್.ವಿಶ್ವನಾಥ ಬಗ್ಗೆಯೂ ಅಸಾಮಾಧನ ವ್ಯಕ್ತಪಡಿಸಿದ್ರು. ಬಿಜೆಪಿ ಸೇರುವಾಗ ಯಡಿಯೂರಪ್ಪಗೆ ವಯಸ್ಸಾಗಿರುವುದು ಗೊತ್ತಿರ್ಲಿಲ್ಲ. ಜೆಡಿಎಸ್ ನಲ್ಲಿ ಕುಟುಂಬ ರಾಜಕಾರಣ ಅಂತಾರೆ, ಅವರ ಪುತ್ರ ಜಿಲ್ಲಾ ಪಂಚಾಯ್ತಿ ಸದಸ್ಯ. ಹಾಗಾದ್ರೆ ಅದು ಕುಟುಂಬ ರಾಜಕಾರಣ ಅಲ್ವಾ ಎಂದು ಪ್ರಶ್ನಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!