‘ಡಿಕೆಶಿ’ಗೆ ಸಿಕ್ತು ಸ್ವೀಟ್.. ಅನರ್ಹರ ಕಥೆ ಏನು?

348

ನವದೆಹಲಿ: ಸೆಪ್ಟಂಬರ್ 3 ರಂದು ಇಡಿ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿದ್ದ ಮಾಜಿ ಸಚಿವ, ಶಾಸಕ ಡಿಕೆ ಶಿವಕುಮಾರಗೆ ಇಂದು ಜಾಮೀನು ನೀಡಲಾಗಿದೆ. ದೆಹಲಿ ಹೈಕೋರ್ಟ್ ಡಿಕೆಶಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಇದರ ನಡುವೆ ಇದೀಗ ಅನರ್ಹ ಶಾಸಕರ ಕಥೆ ಏನು ಅನ್ನೋ ಪ್ರಶ್ನೆ ಮೂಡಿದೆ.

ಸಾಕಷ್ಟು ಬಾರಿ ವಿಚಾರಣೆ ನಡೆದಿರುವ ಅನರ್ಹ ಶಾಸಕರ ಕುರಿತಾದ ಅರ್ಜಿಯ ತೀರ್ಪು ಯಾವಾಗ ಬರುತ್ತೆ ಅನ್ನೋ ಟೆನ್ಷನ್ ನಲ್ಲಿದ್ದಾರೆ. ಇಂದು ಮಧ್ಯಾಹ್ನ ಅನರ್ಹ ಶಾಸಕರ ವಿಚಾರಣೆ ಅಂತಾ ಹೇಳಿಯಾಗಿದ್ದು, ಇನ್ನು ಯಾವಾಗ ಶುರುವಾಗುತ್ತೆ ಅನ್ನೋ ಕುತೂಹಲ ಮೂಡಿದೆ.

ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಬಂಧಿತರಾಗಿದ್ದ ಮಾಜಿ ವಿತ್ ಸಚಿವ ಪಿ.ಚಿದಂಬರಂ ಅವರಿಗೆ ನಿನ್ನೆ ಜಾಮೀನು ನೀಡಲಾಗಿತ್ತು. ಇಂದು ಡಿಕೆಶಿಗೆ ಜಾಮೀನು ನೀಡಲಾಗಿದೆ. ಅದೇ ರೀತಿ ಅನರ್ಹ ಶಾಸಕರಿಗೆ ಸಿಹಿ ಸುದ್ದಿ ಸಿಗುತ್ತಾ? ಕಹಿ ಸುದ್ದಿ ಸಿಗುತ್ತಾ ಅನ್ನೋ ಟೆನ್ಷನ್ ನಲ್ಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!