ಬೆಂಗಳೂರು: ಅನರ್ಹ ಶಾಸಕರ ತೀರ್ಪು ಬರ್ತಿರುವ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪ ಮಧ್ಯಾಹ್ನ 3ಗಂಟೆ ವರೆಗೆ ತಮ್ಮ ಕಾರ್ಯಕ್ರಮಗಳನ್ನ ರದ್ದು ಮಾಡಿದ್ದಾರೆ ಅಂತಾ ಹೇಳಲಾಗ್ತಿದೆ. ಬಿಜೆಪಿಗೂ ತೀರ್ಪಿನ ಬಗ್ಗೆ ಟೆನ್ಷನ್ ಇರುವುದ್ರಿಂದ ಸಿಎಂ ಮಧ್ಯಾಹ್ನದವರೆಗೂ ಕಾರ್ಯಕ್ರಮಗಳನ್ನ ರದ್ದು ಮಾಡಿದ್ದಾರೆ ಎಂದು ಕೆಲ ಮೂಲಗಳಿಂದ ತಿಳಿದು ಬಂದಿದೆ.
ತೀರ್ಪು ಹೊರ ಬೀಳುತ್ತಿದ್ದಂತೆ ಕೋರ್ ಕಮಿಟಿ ಮೀಟಿಂಗ್ ನಡೆಸಲಾಗುತ್ತೆ. ಅಲ್ಲಿ ಉಪ ಚುನಾವಣೆಯ ಅಭ್ಯರ್ಥಿಗಳ ಕುರಿತು ಚರ್ಚೆ ನಡೆಸಲಾಗುತ್ತೆ ಅಂತಾ ಹೇಳಲಾಗ್ತಿದೆ. ಈಗಾಗ್ಲೇ ಅನರ್ಹರಿಗೆ ಮೊದಲ ಆಧ್ಯತೆ ಅನ್ನೋದು ಬಿಜೆಪಿ ನಾಯಕರ ನಿರ್ಧಾರವಾಗಿದ್ದು, ಇದಕ್ಕೆ ಸ್ವಪಕ್ಷೀಯರಿಂದಲೇ ಒಳಗುದ್ದು ಶುರುವಾಗಿದೆ. ಹೀಗಾಗಿ ತೀರ್ಪಿನ ಬಳಿಕ ನಡೆಯುವ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನ ತೆಗೆದುಕೊಳ್ಳಲಾಗುತ್ತೆ ಅಂತಾ ಉನ್ನತ ಮೂಲಗಳಿಂದ ತಿಳಿದು ಬಂದಿದೆ.