ಡಿ.ಕೆ ಶಿವಕುಮಾರ್ ನಾಮಪತ್ರ ಸ್ವಿಕೃತ, ಗೊಂದಲಕ್ಕೆ ತೆರೆ!

116

ಪ್ರಜಾಸ್ತ್ರ ಸುದ್ದಿ

ಕನಕಪುರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಅವರ ಸಹೋದರ, ಸಂಸದ ಡಿ.ಕೆ ಸುರೇಶ್ ಕನಕಪುರದಿಂದ ನಾಮಪತ್ರ ಸಲ್ಲಿಸಿದ್ದರು. ಇದು ಕುತೂಹಲಕ್ಕೆ ಕಾರಣವಾಗಿತ್ತು. ಕಾರಣ, ಡಿ.ಕೆ ಶಿವಕುಮಾರ್ ಅವರನ್ನು ಕೆಲ ಪ್ರಕರಣಗಳಿಗೆ ಸಂಬಂಧಿಸಿದಂತೆ ಅವರನ್ನು ಸಿಲುಕಿಸುವುದು ಹಾಗೂ ಬಿಜೆಪಿ ಪರ ವಕೀಲರು ನಾಮಪತ್ರ ಸರಿಯಾಗಿಲ್ಲ ಎಂದು ದೂರು ಸಲ್ಲಿಸಿದ್ದರು.

ಹಲವು ರಾಜಕೀಯ ತಂತ್ರಗಾರಿಕೆಯನ್ನು ಇಲ್ಲಿ ಮಾಡಲಾಯಿತು. ಹೀಗಾಗಿ ಡಿಕೆಶಿ ಸಹೋದರರು ನಾಮಪತ್ರ ಸಲ್ಲಿಸಿದ್ದರು. ಇಂದು ನಡೆದ ನಾಮಪತ್ರ ಪರಿಶೀಲನೆ ವೇಳೆ ಡಿ.ಕೆ ಶಿವಕುಮಾರ್ ಅವರ ನಾಮಪತ್ರ ಸ್ವಿಕೃತವಾಗಿದೆ. ಅಣ್ಣನ ನಾಮಪತ್ರ ಪುರಸ್ಕಾರಗೊಂಡಿರುವುದರಿಂದ ಸಹೋದರ ಡಿ.ಕೆ ಸುರೇಶ ತಮ್ಮ ನಾಮಪತ್ರವನ್ನು ಸೋಮವಾರ ವಾಪಸ್ ಪಡೆಯಲಿದ್ದಾರೆ ಎನ್ನಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!