ಪ್ರಜಾಸ್ತ್ರ ಸುದ್ದಿ
ಸಿಂದಗಿ: ತಾಲೂಕು ಕೇಂದ್ರದಿಂದ ತುಂಬಾ ಹತ್ತಿರದಲ್ಲಿರುವ ಕನ್ನೊಳ್ಳಿ ಗ್ರಾಮದಲ್ಲಿನ ರಸ್ತೆಯೊಂದು ಸಂಪೂರ್ಣವಾಗಿ ಮಾಯವಾಗಿದೆ. ಅಷ್ಟರ ಮಟ್ಟಿಗೆ ಚರಂಡಿ ನೀರು ಇಲ್ಲಿ ಹರಿದು ಹೋಗುವ ಮೂಲಕ ಜನರ ಓಡಾಟಕ್ಕೆ ತೊಂದರೆಯಾಗುತ್ತಿದೆ.
ದೇಶಕ್ಕೆ ಸ್ವತಂತ್ರ ಸಿಕ್ಕು 70 ವರ್ಷಗಳು ಕಳೆದರೂ ಹಳ್ಳಿಗಳ ಸ್ಥಿತಿ ಇಂದಿಗೂ ಹೇಗಿವೆ ಅನ್ನೋದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಆ ಸಾಲಿಗೆ ಕನ್ನೊಳ್ಳಿ ಗ್ರಾಮದ ಈ ರಸ್ತೆ ಸೇರುತ್ತೆ. ಗ್ರಾಮದ ಹಣಮಂತ ದೇವರ ಗುಡಿಯಿಂದ ಹರನಾಳಕ್ಕೆ ಹೋಗುವ ರಸ್ತೆಯ ಪರಿಸ್ಥಿತಿ ಇದು. ಚರಂಡಿ ನೀರು ಸಂಪೂರ್ಣವಾಗಿ ರಸ್ತೆಯ ಮೇಲೆ ಹರಿದು ಸುಮಾರು 1 ಕಿಲೋ ಮೀಟರ್ ವರೆಗೂ ಹೋಗುತ್ತದೆಯಂತೆ. ಹೀಗಾಗಿ ರೈತರು, ಮಕ್ಕಳು, ಈ ಭಾಗದ ಜನರ ಓಡಾಟಕ್ಕೆ ಸಾಕಷ್ಟು ಕಿರಿಕಿರಿಯಾಗುತ್ತಿದೆ.
ಮೊನ್ನೆ ಸಿಇಓ, ಇಓ ಸರ್ ಬಂದು ಹೋಗಿದ್ದಾರೆ. ಜನರು ಇದ್ದರು. ಅಲ್ಲಿ 10-12 ರಸ್ತೆಗಳಿವೆ. ನೀವು ರಸ್ತೆಗಳನ್ನು ಮಾಡಿಕೊಂಡು ಬನ್ನಿ ಅಪ್ರೋಲ್ ಕೊಡುತ್ತೇವೆ ಎಂದು ಸಾಹೇಬ್ರು ಹೇಳಿದ್ದು, ಈಗ ಕ್ರಿಯಾಯೋಜನೆ ಮಾಡುತ್ತಿದ್ದೇವೆ. ಮುಂದೆ ಅಪ್ರೋಲ್ ಆದ ನಂತರ ಕೆಲಸ ಮಾಡುತ್ತೇವೆ.
ಪಿ.ನಾಯಕ, ಪಿಡಿಒ, ಕನ್ನೊಳ್ಳಿ ಗ್ರಾ.ಪಂ
ಇತ್ತೀಚೆಗಷ್ಟೇ ಗ್ರಾಮ ಪಂಚಾಯ್ತಿ ಚುನಾವಣೆ ಮುಗಿದು ಸದಸ್ಯರು ಬಂದಿದ್ದಾರೆ. ಅಧ್ಯಕ್ಷರ ಆಯ್ಕೆ ಆಗುವ ತನಕ ಅನ್ನೋ ನೆಪ ಹಾಗೂ ಕ್ರಿಯಾಯೋಜನೆ ಸಿದ್ಧವಾದ ಮೇಲೆ ಸರಿಪಡಿಸುತ್ತೇವೆ ಅನ್ನೋ ಸಬೂಬು ನೀಡದೆ ತಕ್ಷಣಕ್ಕೆ ರಸ್ತೆಯ ಮೇಲೆ ನೀರು ಹರಿಯದಂತೆ ಏನು ಮಾಡಬೇಕೋ ಅದನ್ನು ಮಾಡಿ ಜನರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಿದೆ ಅನ್ನೋದು ಸ್ಥಳೀಯರ ಆಗ್ರಹ. ಹೀಗಾಗಿ ಗ್ರಾಮ ಪಂಚಾಯ್ತಿ ಪಿಡಿಓ, ತಾಲೂಕು ಪಂಚಾಯ್ತಿ ಇಓ ಕೂಡಲೇ ಗಮನ ಹರಿಸಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.