ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ದಂಧೆಗೆ ಸಂಬಂಧಿಸಿದಂತೆ ನಟಿ ರಾಗಿಣಿ, ಸಂಜನಾ ಸೇರಿದಂತೆ ಹಲವರ ಬಂಧನವಾಗಿದೆ. ಇದರ ಜೊತೆಗೆ ಇದೀಗ ಡ್ರಗ್ಸ್ ಪೆಡ್ಲರ್ ರಾಹುಲ ಸ್ಯಾಂಡಲ್ ವುಡ್ ಜನರ ಜೊತೆ ಫೋಟೋ ತೆಗೆಸಿಕೊಂಡಿರುವುದು ವೈರಲ್ ಆಗಿದೆ.
ನಿರ್ಮಾಪಕ ಕೆ.ಮಂಜು, ಸಂಗೀತ ನಿರ್ದೇಶಕ ಗುರುಕಿರಣ, ನಟ ಶ್ರೀನಗರ ಕಿಟ್ಟಿ, ಸಚಿವ ಆರ್.ಅಶೋಕ, ಈ ಹಿಂದೆ ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಭಾಸ್ಕರ ರಾವ್ ಸೇರಿದಂತೆ ಅನೇಕರ ಜೊತೆ ಫೋಟೋ ತೆಗೆಸಿಕೊಂಡಿರುವುದು ವೈರಲ್ ಆಗಿದೆ. ಇವರನ್ನ ಸಿಸಿಬಿ ಪೊಲೀಸರು ವಿಚಾರಣೆಗೆ ಕರೆಯುತ್ತಾರಾ ಅನ್ನೋ ಪ್ರಶ್ನೆ ಮೂಡಿದೆ.
ಡ್ರಗ್ಸ್ ಪೆಡ್ಲರ್ ರಾಹುಲ ಸ್ಟಾರ್ ನಟ, ನಟಿಯರು, ನಿರ್ಮಾಪಕರು, ರಾಜಕಾರಣಿಗಳ ಜೊತೆ ಸಹಜವಾಗಿ ಫೋಟೋ ತೆಗೆಸಿಕೊಂಡಿದ್ದಾ? ಇವರ ಜೊತೆ ಏನಾದ್ರು ಸಂಬಂಧ ಇತ್ತಾ ಅನ್ನೋದರ ತನಿಖೆ ನಡೆಯಬೇಕಿದೆ..