ಕರ್ತವ್ಯದ ಜೊತೆಗೆ ಸಾಮಾಜಿಕ ಸೇವೆಗೂ ಸೈ ವಿಜಯಪುರ ಕಾಪ್

226

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಟ್ರಾಫಿಕ್ ಪೋಲೀಸರು ಎಂದಾಕ್ಷಣವೇ ವಾಹನ ಸವಾರರು ಎಸ್ಕೇಪ್ ಆಗಲು ನೋಡ್ತಾರೆ. ಎಲ್ಲಿ ಸಿಕ್ಕಿ ಹಾಕಿಕೊಂಡ್ರೆ ಇಲ್ಲ ಸಲ್ಲದ ರೂಲ್ಸ್ ಹೇಳಿ ದಂಡ ವಸೂಲಿ ಮಾಡ್ತಾರೆ ಎಂದು ತಪ್ಪಿಸಿಕೊಳ್ಳಲು ನೋಡ್ತಾರೆ. ಅವರ ಕರ್ತವ್ಯದ ಜೊತೆಗೆ ಸಾಮಾಜಿಕ ಕೆಲಸಗಳನ್ನ ಮಾಡುವ ಪಿಎಸ್ಐ ಒಬ್ಬರ ಗುಮ್ಮಟ ನಗರಿಯಲ್ಲಿದ್ದಾರೆ.

ವಿಜಯಪುರ ನಗರದ ಹಲವು ಕಡೆ ರಸ್ತೆಗಳು ಹಾಳಾಗಿವೆ. ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸವಾರರ ಬಲಿಗಾಗಿ ಗುಂಡಿಗಳು ಕಾದಿವೆ. ಇಂತಹ ರಸ್ತೆ ಗುಂಡಿಗಳನ್ನ ಟ್ರಾಫಿಕ್ ಪಿಎಸ್ಐ ಸಂಜಯ ಕಲ್ಲೂರ ಸ್ವತಃ ತಾವೇ ಮುಂದೆ ನಿಂತು ಮುಚ್ಚಿಸುವ ಕೆಲಸ ಮಾಡಿದ್ದಾರೆ.

ನಗರದ ಬಸ್ ನಿಲ್ದಾಣ, ಕೆಸಿ ಮಾರುಕಟ್ಟೆ, ಸರಾಫ್ ಬಜಾರ್ ರಸ್ತೆಯಲ್ಲಿ ಹೆಚ್ಚಾಗಿರುವ ಗುಂಡಿಗಳನ್ನ ಮುಚ್ಚಿಸುವ ಮೂಲಕ ಪಿಎಸ್ಐ ಸಂಜಯ ಕಲ್ಲೂರ ಸಾಮಾಜಿಕ ಕಾರ್ಯ ಮಾಡಿದ್ದಾರೆ. ಇದಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.




Leave a Reply

Your email address will not be published. Required fields are marked *

error: Content is protected !!