ಪ್ರಜಾಸ್ತ್ರ ಸುದ್ದಿ
ಚೆನ್ನೈ: ಸಾಮಾಜ ಸುಧಾರಕ, ಪ್ರಗತಿಪರ ಚಿಂತಿಕ ಇ.ವಿ ರಾಮಸ್ವಾಮಿ ಪೆರಿಯಾರ್ ಜನ್ಮ ದಿನವಾದ ಸೆಪ್ಟೆಂಬರ್ 17ರಂದು ಸಾಮಾಜಿಕ ನ್ಯಾಯದಿನ ಎಂದು ಆಚರಿಸಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ. ಈ ಕುರಿತು ಸಿಎಂ ಎಂ.ಕೆ ಸ್ಟಾಲಿನ್ ಸೋಮವಾರ ವಿಧಾನಸಭೆಯಲ್ಲಿ ಘೋಷಿಸಿದರು.
ಪೆರಿಯಾರ್ ಅವರ ಚಿಂತನೆಗಳು, ವೈಚಾರಿಕೆ ಹಾಗೂ ಸಮಾನತೆಯ ಅಂಶಗಳು ಶತಮಾನಗಳಿಂದ ತಮಿಳುನಾಡು ಸಮಾಜದ ಬೆಳವಣಿಗೆಗೆ ಅಡಿಪಾಯ ಹಾಕಿಕೊಟ್ಟಿದ್ದು, ಇದರ ಜೊತೆಗೆ ಭವಿಷ್ಯದ ಸಾಮಾಜಿಕ ಬೆಳವಣಿಗೆ ಸಹಕಾರಿಯಾಗುತ್ತೆ ಎಂದು ಸಿಎಂ ಸ್ಟಾಲಿನ್ ಹೇಳಿದ್ದಾರೆ.