ವಿದ್ಯುತ್ ರಿಪೇರಿಗೆ ಕಂಬವೇರಿದವನ ಪ್ರಾಣಪಕ್ಷಿ ಹಾರಿ ಹೋಯ್ತು

270

ಪ್ರಜಾಸ್ತ್ರ ಸುದ್ದಿ

ಬಳ್ಳಾರಿ: ವಿದ್ಯುತ್ ಕಂಬವೇರಿ ರಿಪೇರಿ ಮಾಡಲು ಯತ್ನಿಸಿದ ವ್ಯಕ್ತಿ ದಾರುಣವಾಗಿ ಮೃತಪಟ್ಟ ಘಟನೆ ಜಿಲ್ಲೆಯ ಕುರುಗೋಡು ತಾಲೂಕಿನ ದಮ್ಮೂರು ಗ್ರಾಮದಲ್ಲಿ ಗುರುವಾರ ಮುಂಜಾನೆ ಸಂಭವಿಸಿದೆ. ಬದ್ರಿ ಎಂಬಾತ ಮೃತಪಟ್ಟ ವ್ಯಕ್ತಿ.

ಮುಂಜಾನೆ ಹೊಲದಲ್ಲಿ ವಿದ್ಯುತ್ ಕಂಬ ಏರಿ ತಂತಿ ಜೋಡಿಸಲು ಹೋಗಿದ್ದಾನೆ. ಆಗ ಶಾಕ್ ಹೊಡೆದಿದೆ. ಇದು ಎಷ್ಟೊಂದು ಭೀಕರವಾಗಿ ನಡೆದಿದೆ ಎಂದರೆ, ವ್ಯಕ್ತಿಯ ರುಂಡ ಮುಂಡವೇ ಬೇರೆಯಾಗಿದೆ. ವ್ಯಕ್ತಿಯ ಮುಂಡ ತಂತಿಯ ಮೇಲೆ ಉಳಿದರೆ ರುಂಡ ಕತ್ತರಿಸಿ ಬಿದ್ದಿದೆ. ಈತ ವಿದ್ಯುತ್ ನಿಗಮದ ವ್ಯಕ್ತಿ ಆಗಿಲ್ಲ ಎಂದು ತಿಳಿದು ಬಂದಿದೆ. ಘಟನೆಯಿಂದ ಇಡೀ ಗ್ರಾಮದ ಜನತೆ ಬೆಚ್ಚಿ ಬಿದ್ದಿದ್ದಾರೆ.




Leave a Reply

Your email address will not be published. Required fields are marked *

error: Content is protected !!