ಮಂಡ್ಯ: ಕರೋನಾದಿಂದಾಗಿ ಎಲ್ಲೆಡೆ ಲಾಕ್ ಡೌನ್ ಆಗಿದೆ. ಊರುಗಳೆಲ್ಲ ಬೀಕೋ ಎನ್ನುತ್ತಿವೆ. ಇಂತದರ ನಡುವೆ ನಾಡಿಗೆ ಆನೆಗಳು ಎಂಟ್ರಿಯಾಗ್ತಿವೆ. ಮಂಡ್ಯದ ಮದ್ದೂರಿಗೆ ಕಾಡಾನೆಗಳ ಹಿಂಡು ಎಂಟ್ರಿಕೊಟ್ಟಿವೆ.
ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಐದು ಕಾಡಾನೆಗಳು, ಮದ್ದೂರು ಪಟ್ಟಣದ ಶಿಂಷಾ ನದಿಯ ತಟದಲ್ಲಿ ಬೀಡು ಬಿಟ್ಟಿವೆ. ಶಿಂಷಾ ನದಿಯಲ್ಲಿ ಕಾಡಾನೆಗಳು ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಅದೆ ರೀತಿ ಇಂದು ಸಹ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದೆ.
ಕಾಡಾನೆ ದಾಳಿಯಿಂದಾಗಿ ಸ್ಥಳೀಯ ಜಮೀನಿನ ರೈತರಲ್ಲಿ ಆತಂಕ ಮನೆ ಮಾಡಿದೆ. ಕನಕಪುರದ ಕಾಡಿನಿಂದ ಶಿಂಷಾ ನದಿಗೆ ಕಡೆಗೆ ಐದು ಕಾಡಾನೆಗಳು ಬಂದಿದ್ದು, ನಾಡಿಗೆ ಬಂದಿರೋ ಕಾಡಾನೆ ಓಡಿಸುವಂತೆ ಅರಣ್ಯ ಇಲಾಖೆಗೆ ರೈತರ ಮನವಿ ಮಾಡಿದ್ದಾರೆ.