ಬೆಂಗಳೂರು: ನಗರದಲ್ಲಿ ಕರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಿದ್ರೂ ಲಾಕ್ ಡೌನ್ ನಿಯಮ ಪಾಲಿಸದೆ ಜನರು ಓಡಾಟ ಕಂಡು ಬರುತ್ತಿದೆ. ಹೀಗಾಗಿ ಲಾಕ್ ಡೌನ್ ಮುಂದಿನ ಹಂತವಾಗಿ ಸೀಲ್ ಡೌನ್ ಜಾರಿಗೊಳಿಸಲಾಗಿದೆ. ಈ ಟೈಂನಲ್ಲಿ ಅಗತ್ಯ ವಸ್ತುಗಳನ್ನ ಸಹ ತರಲು ಹೊರ ಬರುವಂತಿಲ್ಲ.
ನಗರದ ಹಲವು ಏರಿಯಾಗಳಲ್ಲಿ ಸೀಲ್ ಡೌನ್ ಜಾರಿಗೊಳಿಸಲಾಗಿದೆ. ಇಲ್ಲಿ ಅಗತ್ಯ ವಸ್ತುಗಳು ಸಹ ಸಿಗೋದಿಲ್ಲ. ಹೀಗಾಗಿ ಮನೆಯಿಂದ ಯಾರೂ ಹೊರ ಬರುವಂತಿಲ್ಲ. ಪೊಲೀಸ್ರು ಡ್ರೋಣ್ ಮೂಲಕ ನಿಗಾ ವಹಿಸಿದ್ದಾರೆ. ಅಗತ್ಯ ವಸ್ತುಗಳನ್ನ ಮನೆ ಬಾಗಿಲಿಗೆ ಪೂರೈಕೆ ಮಾಡಲಾಗುವುದು. ಇದಕ್ಕಾಗಿ ಸರ್ಕಾರ ಆನ್ ಲೈನ್ ಸರ್ವಿಸ್ ಶುರು ಮಾಡಲಿದೆ.
ಸೀಲ್ ಡೌನ್ ಏರಿಯಲ್ಲಿ ಯಾರೊಬ್ಬರೂ ಮನೆಯಿಂದ ಆಚೆ ಬರುವಂತಿಲ್ಲ. ಪ್ರತಿಯೊಬ್ಬರನ್ನ ಪೊಲೀಸ್ರು ಮಾನಿಟರ್ ಮಾಡ್ತಾರೆ. ಹೀಗಾಗಿ ಇಂಥಾ ಏರಿಯಾಗಳಲ್ಲಿ ಸಂಪೂರ್ಣವಾಗಿ ಪೊಲೀಸ್ರ ಹದ್ದಿನ ಕಣ್ಣು ಇರುತ್ತೆ. ಈ ಟೈಂನಲ್ಲಿಯೂ ಏನಾದ್ರೂ ಸ್ಟೈಲ್ ಮಾಡಲು ಹೋದ್ರೆ ಅವರ ಗ್ರಹಚಾರ ಕೆಟ್ಟಂತೆ. ಇನ್ನು ಈ ಸೀಲ್ ಡೌನ್ ನ್ನ ಉಳಿದ ಜಿಲ್ಲೆಗಳಲ್ಲೂ ಜಾರಿಗೆ ಮಾಡಲಾಗುತ್ತಾ ಅನ್ನೋ ಪ್ರಶ್ನೆ ಮೂಡಿದೆ. ಯಾಕಂದ್ರೆ, ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗ್ತಿದ್ದು, ಇತರೆ ಜಿಲ್ಲೆಗಳಿಗೂ ವಿಸ್ತರಿಸ್ತಾರಾ ಅನ್ನೋ ಕುತೂಹಲ ಮೂಡಿದೆ.