ಡೆಡ್ಲಿ ಸೋಮ ಖ್ಯಾತಿಯ ನಟ ಆದಿತ್ಯ ಮೀಡಿಯಾಗಳ ವಿರುದ್ಧ ಟ್ವೀಟ್ ವಾರ್ ನಡೆಸಿದ್ದಾರೆ. ಅವರ ಮುಂದುವರೆದ ಅಧ್ಯಾಯ ಸಿನ್ಮಾದ ಟ್ರೇಲರ್ ಲಾಂಚಿಂಗ್ ವೇಳೆ ನಡೆದ ಘಟನೆ ಬಗ್ಗೆ ಮೀಡಿಯಾ ಕೀಳು ಪ್ರಚಾರ ಮಾಡ್ತಿವೆ ಅಂತಾ ಸಿಟ್ಟನ್ನ ಹೊರ ಹಾಕಿದ್ದಾರೆ.
ಬೇಡವಾದ ವಿವಾದಗಳನ್ನ ಹುಟ್ಟುಹಾಕಿ ಸ್ನೇಹಿತರ ನಡುವೆ ಜಗಳ ಹಚ್ಚುವ ಕೆಲಸ ಮಾಡ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಗಿದ್ದು ಏನಪ್ಪ ಅಂದ್ರೆ, ಮುಂದುವರೆದ ಅಧ್ಯಾಯ ಸಿನ್ಮಾದ ಟ್ರೇಲರ್ ಲಾಂಚಿಂಗ್ ವೇಳೆ ನಿರ್ದೇಶಕ ವೈ.ವಿ ರಾವ, ಪುಟ್ಟಣ್ಣ ಕಣಗಾಲ ಆದಿಯಾಗಿ ಇತ್ತೀಚಿನ ನಿರ್ದೇಶಕರ ಫೋಟೋ, ಹೆಸರಿನ ಕ್ಲಿಪ್ ಪ್ಲೇ ಮಾಡಿ ಧನ್ಯವಾದಗಳನ್ನ ಸಲ್ಲಿಸಲಾಗಿತ್ತು. ಆದ್ರೆ, ಇದರಲ್ಲಿ ನಟ, ನಿರ್ದೇಶಕ ಸುದೀಪರನ್ನ ಕೈ ಬಿಡಲಾಗಿತ್ತು.
ಸುದೀಪ ಫೋಟೋ ಕೈಬಿಟ್ಟಿರುವುದಕ್ಕೆ ಮಾಧ್ಯಮಗಳು ನಟ ಆದಿತ್ಯ ಅವರನ್ನ ಕೇಳಿದ್ರೆ ನೋ ಕಮೆಂಟ್ಸ್ ಅಂದಿದ್ರು. ಈ ಕಾರ್ಯಕ್ರಮಕ್ಕೆ ದರ್ಶನ ಮುಖ್ಯ ಅತಿಥಿಯಾಗಿ ಬಂದಿದ್ರು. ಸುದೀಪ ಹಾಗೂ ದರ್ಶನ ನಡುವೆ ಸ್ನೇಹ ಉಳಿದಿಲ್ಲ. ಹೀಗಾಗಿ ಬೇಕೆಂದು ಸುದೀಪ ಹೆಸರು ಬೀಡಲಾಗಿದೆ ಎಂದು ಅವರ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಇದನ್ನ ಹೇಳಿದ ಮೀಡಿಯಾ ವಿರುದ್ಧ ನಟ ಆದಿತ್ಯ ಗರಂ ಆಗಿದ್ದಾರೆ.