ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಭರ್ಜರಿಯಾಗಿ ವಾಗ್ದಾಳಿ ನಡೆಸಿದ್ದಾರೆ. ಸ್ವರ್ಗ ಸೃಷ್ಟಿ ಮಾಡ್ತೀನಿ ಅಂತಾ ಹೇಳಿದ ಮೋದಿ ಆರೇ ವರ್ಷಗಳಲ್ಲಿ ನರಕ ಸೃಷ್ಟಿಸಿದ್ದಾರೆ ಅಂತಾ ಕಿಡಿ ಕಾರಿದ್ರು.
ದೇಶದ ಆರ್ಥಿಕತೆ ಇತಿಹಾಸದಲ್ಲಿಯೇ ಅತ್ಯಂತ ಕೆಳ ಮಟ್ಟದಲ್ಲಿದೆ. ಅವರ ಪ್ರಕಾರ ದೇಶದ ಜಿಡಿಪಿ ಶೇಕಡಾ 4.5 ಇದೆ. ನನ್ನ ಪ್ರಕಾರ 2.5 ರಷ್ಟಿದೆ ಎಂದರು. ಇದೆಲ್ಲ ಮುಚ್ಚಿ ಹಾಕಲು ಪೌರತ್ವ ತಿದ್ದುಪಡಿ ಕಾಯ್ದೆ ನಾಟಕ ಶುರು ಮಾಡಿ ದೇಶದ ಜನರ ಗಮನ ಬೇರೆಡೆ ಸೆಳೆಯುವಂತೆ ಮಾಡಿದ್ದಾರೆ ಅಂತಾ ಹೇಳಿದ್ರು.
ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಯುವಕನೊಬ್ಬ ಫೈರಿಂಗ್ ಮಾಡಿದ್ದಾನೆ. ಮೋದಿ, ಅಮಿತ ಶಾ ಪ್ರಚೋದನೆಯಿಂದಲೇ ಫೈರಿಂಗ್ ನಡೆದಿದೆ ಅಂತಾ ಆರೋಪಿಸಿದ್ರು. ಇದೆ ರೀತಿ ನಡೆದ್ರೆ ದೇಶದಲ್ಲಿ ಭದ್ರತೆ ಎಲ್ಲಿ ಇರುತ್ತೆ ಅಂತಾ ಪ್ರಶ್ನಿಸಿದ್ರು.