ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಶಾಸಕಾಂಗ ಪಕ್ಷದ ನಾಯಕ ಆಯ್ಕೆ ಕಗ್ಗಂಟು ಎಲ್ಲವೂ ಮುಗಿದಿದೆ. ಸಿದ್ದರಾಮಯ್ಯ ಸಿಎಂ, ಡಿ.ಕೆ ಶಿವಕುಮಾರ್ ಡಿಸಿಎಂ ಮಾಡಲಾಗಿದೆ. ಹೀಗಾಗಿ ಪ್ರಮಾಣ ವಚನ ಸಮಾರಂಭ ನಡೆಸಲು ಸಜ್ಜಾಗುತ್ತಿದೆ. ಮೇ 20ರಂದು ಪ್ರಮಾಣ ವಚನ ಸಮಾರಂಭ ನಡೆಯಲಿದ್ದು, ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ಸೇರಿ ಅನೇಕ ಹಿರಿಯ ನಾಯಕರು ಭಾಗವಹಿಸಲಿದ್ದಾರೆ.
ಸಿಎಂ, ಡಿಸಿಎಂ ಪ್ರಮಾಣ ವಚನ ಸ್ವೀಕಾರವಾದ 2 ದಿನದೊಳದಿಗೆ ಸಚಿವ ಸಂಪುಟ ಆಯ್ಕೆ ನಡೆಯಲಿದೆ. ಈಗಾಗ್ಲೇ ಬಹುತೇಕ ಸಚಿವರು ಫೈನಲ್ ಆಗಿದೆ. ಅಧಿಕೃತ ಘೋಷಣೆ ಮಾಡುವುದೊಂದೆ ಬಾಕಿ. ಸಚಿವ ಸ್ಥಾನ ಸಿಗದೆ ಇರುವ ನಾಯಕರ ನಡೆ ಏನು ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ.