ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಜನರಲ್ಲಿ ಇದೀಗ ಮೂಡಿರುವ ಪ್ರಶ್ನೆ ಜೂನ್ 7ರ ನಂತರ ಲಾಕ್ ಡೌನ್ ವಿಸ್ತರಣೆ ಆಗುತ್ತಾ ಆಗಲ್ವಾ? ಒಂದು ವೇಳೆ ಲಾಕ್ ಡೌನ್ ಮುಂದುವರೆಸಿದ್ರೆ ಎಷ್ಟು ದಿನ ಮುಂದುವರೆಸಲಾಗುತ್ತೆ? ಹೊಸದಾಗಿ ಪ್ಯಾಕೇಜ್ ಘೋಷಣೆ ಮಾಡ್ತಾರಾ? ಈ ಬಾರಿಯ ಪ್ಯಾಕೇಜ್ ನಲ್ಲಿ ಯಾರಿಗೆಲ್ಲ ಸೌಲಭ್ಯ ಸಿಗಲಿದೆ ಅನ್ನೋ ಹಲವು ಪ್ರಶ್ನೆಗಳು ಮೂಡಿವೆ.
ಈ ಎಲ್ಲ ಪ್ರಶ್ನೆಗಳು ಇಂದು ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಯಡಿಯೂರಪ್ಪ ನಡೆಸುವ ಸುದ್ದಿಗೋಷ್ಠಿಯಲ್ಲಿ ತಿಳಿಯಲಿದೆ. ಸೋಂಕು ಶೇಕಡ 5ರಷ್ಟು ಬರುವ ತನಕ ಲಾಕ್ ಡೌನ್ ಮಾಡಬೇಕು ಅನ್ನೋ ಅಭಿಪ್ರಾಯ ಕೇಳಿ ಬಂದಿದೆಯಂತೆ. ಹೀಗಾಗಿ ಸಿಎಂ ಲಾಕ್ ಡೌನ್ ಎಷ್ಟು ದಿನ ಮುಂದುವರೆಸುತ್ತಾರೆ? ಯಾರಿಗೆಲ್ಲ ಪ್ಯಾಕೇಜ್ ಘೋಷಿಸ್ತಾರೆ ಅನ್ನೋದಕ್ಕೆ ಉತ್ತರ ಸಿಗಲಿದೆ.