ಪ್ರಜಾಸ್ತ್ರ ಸುದ್ದಿ
ಶಿವಮೊಗ್ಗ: ಜಗದೀಶ ಶೆಟ್ಟರ್ ಅವರು ತೆಗೆದುಕೊಂಡ ನಿರ್ಧಾರ ನಾನು ಮಾಡಲ್ಲ. ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ. ಸಚಿವನಾದ್ರೂ ಓಕೆ. ಡಿಸಿಎಂ ಆದ್ರೂ ಓಕೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಮುಂದಿನ ಚುನಾವಣೆಗಾಗಿ ಈಗಿನಿಂದಲೇ ಪಕ್ಷ ಸಂಘಟನೆ ಕೆಲಸ ಮಾಡಬೇಕು. ಪಕ್ಷವನ್ನ ಸಂಘಟನೆ ಮಾಡುವ ಕೆಲಸಕ್ಕೂ ನಾನು ಸಿದ್ಧನಾಗಿದ್ದೇನೆ. ಪಕ್ಷ ಏನೇ ತೀರ್ಮಾನ ತೆಗೆದುಕೊಂಡರು ಅದಕ್ಕೆ ನಾನು ತಯಾರಾಗಿದ್ದೇನೆ ಎಂದರು.