ಪ್ರಜಾಸ್ತ್ರ ಅಪರಾಧ ಸುದ್ದಿ
ಮಸ್ಕಿ: ತಂದೆಯೇ ಮಗನನ್ನ ಕೊಲೆ ಮಾಡಿದ್ದಾನೆ ಎಂದು ಹೇಳಲಾಗ್ತಿದೆ. ಸಿಂಧನೂರು ತಾಲೂಕಿನ ತುರುವಿನಹಾಳ ಪಟ್ಟಣದಲ್ಲಿ ನಡೆದಿದೆ. ಯಲ್ಲಪ್ಪ(27) ಕೊಲೆಯಾದ ಯುವಕ. ತಂದೆಯೇ ಮಗನಿಗೆ ಕಾಲುವೆಗೆ ನೂಕಿ ಕೊಲೆ ಮಾಡಿದ್ದಾನೆ ಎನ್ನಲಾಗ್ತಿದೆ.
ಮೂರು ಮದುವೆಯಾಗಿರುವ ತಂದೆ ಹನುಮಂತಪ್ಪ ಹಾಗೂ ಮಗನ ನಡುವೆ ಆಸ್ತಿ ವಿಚಾರವಾಗಿ ಆಗಾಗ ಗಲಾಟೆಯಾಗುತಿತ್ತು. ಇದ್ರಿಂದಾಗಿ ಈಜು ಬಾರದ ಮಗನನ್ನ ಕಾಲುವೆ ಬಳಿಕ ಕರೆದುಕೊಂಡು ಬಂದು ನೂಕಿದ್ದಾನೆ ಎಂದು ಹೇಳಲಾಗ್ತಿದೆ. ಈ ಸಂಬಂಧ ತುರುವಿನಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.