ಜನರ ದಾರಿ ತಪ್ಪಿಸುತ್ತಿದ್ದಾರ ಮಾಜಿ ಸಚಿವ‌ ವಿನಯ ಕುಲಕರ್ಣಿ?

344

ಪ್ರಜಾಸ್ತ್ರ ಸುದ್ದಿ

ಧಾರವಾಡ: ಧಾರವಾಡ ಜಿಲ್ಲಾ ಪ್ರವೇಶ ವಿಚಾರ ಸಂಬಂಧ ಮಾಜಿ ಸಚಿವ ವಿನಯ ಕುಲಕರ್ಣಿ ಜನರ ದಾರಿ ತಪ್ಪಿಸುತ್ತಿದ್ದಾರ ಅನ್ನೋ ಪ್ರಶ್ನೆ ಮೂಡಿದೆ. ಯಾಕಂದ್ರೆ ಸುಪ್ರೀಂ ಕೋರ್ಟ್ ನೀಡಿರುವ ಆರ್ಡರ್ ಕುರಿತು ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಏ.29ರಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತಮಗೆ ಜಿಲ್ಲಾ ಪ್ರವೇಶ ನಿರಾಕರಿಸಿಲ್ಲ.‌ ಸಿಬಿಐ ಮುಂದೆ ಹಾಜರಾಗುವ ಕುರಿತು ಹೇಳಿದೆ ಎಂದು ಪತ್ರಿಕಾ ಪ್ರಕಟಣೆ ನೀಡಿದ್ದ ಮಾಜಿ ಸಚಿವ ವಿನಯ ಕುಲಕರ್ಣಿಗೆ ತೀವ್ರ ಹಿನ್ನಡೆಯಾಗಿದೆಯಂತೆ.

ಜಿಲ್ಲಾ ಪಂಚಾಯತ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದ ಆರೋಪ ಎದುರಿಸುತ್ತಿರುವ ವಿನಯ ಕುಲಕರ್ಣಿಗೆ, ಧಾರವಾಡ ಜಿಲ್ಲಾ ಪ್ರವೇಶವನ್ನು ಸುಪ್ರೀಂ ಕೋರ್ಟ್ ಸಾರಾಸಗಟಾಗಿ ತಳ್ಳಿಹಾಕಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಟ್ರಯಲ್ ಕೋರ್ಟ್ ಹತ್ತಿರ ಪರಿಹರಿಸಿಕೊಳ್ಳಿ ಎಂದು ಹೇಳಿದ್ದಾರೆ ಅಂತಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆದ್ರೆ, ಕೋರ್ಟ್ ಆರ್ಡರ್ ಕಾಪಿಯಲ್ಲಿ ಆ ರೀತಿ ಯಾವುದೇ ಆದೇಶವಿಲ್ಲ. ಹೀಗಾಗಿ ವಿನಯ ಕುಲಕರ್ಣಿ ಸುಳ್ಳು ಹೇಳಿದ್ರಾ ಅನ್ನೋ ಅನುಮಾನ ಮೂಡಿದೆ.

ತಿಂಗಳಿಗೆ ಎರಡು ಬದಲು ಪ್ರತಿ ತಿಂಗಳ ಮೊದಲ ಶನಿವಾರ ಸಿಬಿಐ‌ ಮುಂದೆ ಹಾಜರಾಗಬೇಕೆಂದು ಹೇಳಿದೆ ಹೊರತು, ಧಾರವಾಡ ಜಿಲ್ಲಾ ಪ್ರವೇಶದ ಕುರಿತು ಪ್ರಸ್ತಾಪಿಸಿಲ್ಲ ಎನ್ನುವುದು ಗಮನಿಸಬೇಕಾದ ಅಂಶ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆಗಳು ನಡೆದಿವೆ.




Leave a Reply

Your email address will not be published. Required fields are marked *

error: Content is protected !!