ಪ್ರಜಾಸ್ತ್ರ ಸುದ್ದಿ
ನವದೆಹಲಿ: ಮೂರು ಕೃಷಿ ಕಾಯ್ದೆಗಳನ್ನು ಪ್ರಧಾನಿ ಮೋದಿ ಇಂದು ವಾಪಸ್ ಪಡೆದಿದ್ದಾರೆ. ಈ ಮೂಲಕ ಕಳೆದ ಒಂದು ವರ್ಷದಿಂದ ಹೋರಾಟ ಮಾಡುತ್ತಿದ್ದ ರೈತರಿಗೆ ಜಯ ಸಿಕ್ಕಿದೆ. ಈ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್ ಮೂಲಕ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಷ್ಟು ಸಮಯ ತಕೊಂಡಿದ್ದು ಯಾಕೆ? ಒಂದೇ ಒಂದು ಸಲವೂ ಬಾರ್ಡರ್ ಬಳಿ ಹೋಗಲಿಲ್ಲ, ಒಂದೇ ಒಂದು ಸಲವೂ ಧರಣಿನಿರತ ರೈತರ ಬಳಿ ಹೋಗಲಿಲ್ಲ, ಒಂದು ಸಲವೂ ಈ ಬಗ್ಗೆ ಮಾತಾಡಲಿಲ್ಲ, ಹತ್ಯೆ ನಡೆದ ಸ್ಥಳಕ್ಕೂ ಭೇಟಿ ಕೊಡಲಿಲ್ಲ. ಈಗ ಅಚಾನಕ್ಕಾಗಿ ಏನಾಯ್ತು?! ಇದು ಚುನಾವಣಾ ತಂತ್ರ ಎಂಬುದನ್ನು ಅರ್ಥ ಮಾಡಿಕೊಳ್ಳುವಷ್ಟು ಬುದ್ಧಿವಂತರಿದ್ದಾರೆ ಈ ದೇಶದ ಜನ ಎಂದು ಟ್ವೀಟ್ ಮಾಡಿದ್ದಾರೆ.