ಪ್ರಜಾಸ್ತ್ರ ಸುದ್ದಿ
ಸಿಂದಗಿ: ಬೆಳೆಸಾಲ ಮಾಡಿದ್ದ ರೈತನೊಬ್ಬ ಅದನ್ನ ತೀರಿಸಲು ಆಗದೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಗುತ್ತರಗಿ ಗ್ರಾಮದ ಜಮೀನಿನಲ್ಲಿ ಜೂನ್ 6ರಂದು ನಡೆದಿದೆ. ಶಂಕರ ಹಣಮಂತ್ರಾಯ ಬಿರಾದಾರ(55) ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದಾನೆ.
ಭಂಟನೂರ ಗ್ರಾಮದ ರೈತ ಶಂಕರ ಅವರಿಗೆ ಸಂಬಂಧಿಸಿದಂತೆ ಗುತ್ತರಗಿ ಗ್ರಾಮದಲ್ಲಿ 5 ಎಕರೆ 1 ಗುಂಟೆ ಜಮೀನು ಇದೆ. ಗಬಸಾವಳಗಿ ಗ್ರಾಮದ ಕೆವಿಜಿವಿ ಬ್ಯಾಂಕ್ ನಲ್ಲಿ 1 ಲಕ್ಷದ 50 ಸಾವಿರ ಹಾಗೂ ಗುತ್ತರಗಿ ಗ್ರಾಮದ ಸೂಸೈಟಿಯಲ್ಲಿ 65 ಸಾವಿರ ರೂಪಾಯಿ ಸೇರಿದಂತೆ 2.15 ಲಕ್ಷ ರೂಪಾಯಿ ಬೆಳೆ ಸಾಲ ಮಾಡಿದ್ದಾರೆ.
ಆದ್ರೆ, ಕಳೆದ ವರ್ಷ ಸರಿಯಾಗಿ ಮಳೆ ಬರದೆ ಬೆಳೆ ಹಾನಿಯಾಗಿದೆ. ಇದ್ರಿಂದಾಗಿ ಸಾಲ ತೀರಿಸುವುದು ಹೇಗೆಂದು ಮನನೊಂದು ಕ್ರಿಮಿನಾಶಕ ಸೇವಿಸಿದ್ದಾರೆ. ಅವರನ್ನ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ ಎಂದು ಮೃತನ ಮಗ, ಸಿಂದಗಿ ಪೊಲೀಸ್ ಠಾಣೆಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.