ಪ್ರಜಾಸ್ತ್ರ ಸುದ್ದಿ
ಆಲಮೇಲ: ಗುಡಿಸಿಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ, ಚಿನ್ನಾಭರಣ ಹಾಗೂ ಆಹಾರ ಧಾನ್ಯ ಸಂಪೂರ್ಣ ಭಸ್ಮವಾದ ಘಟನೆ ಕೊರಳ್ಳಿ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.
ಆಲಮೇಲ ತಾಲೂಕಿನ ಕೊರಹಳ್ಳಿ ಗ್ರಾಮದ ಖಾಜಾಸಾಭ ನಧಾಪ ಅವರಿಗೆ ಸೇರಿದತೋಟದ ವಸ್ತಿಯಲ್ಲಿದ್ದ ಮನೆಗೆ ಬೆಂಕಿ ತಗುಲಿದೆ.
ಇತ್ತೀಚೆಗೆ ಕಬ್ಬಿನ ಬಿಲ್ ತೆಗೆದುಕೊಂಡು ತಂದ ಅಂದಾಜು 1.6 ಲಕ್ಷ ಹಣ,50ಗ್ರಾಂ ಚಿನ್ನಾಭರಣ, ಬೆಳ್ಳಿ, ಹಾಗೂ ಅಪಾರ ಪ್ರಮಾಣದ ಆಹಾರ ಧಾನ್ಯ ಗಳು ಸೇರಿದಂತೆ ಸುಮಾರು 5 ಲಕ್ಷ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ ಎಂದು ಹೇಳಲಾಗ್ತಿದೆ.
ಆಲಮೇಲ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.