ನವದೆಹಲಿ: ನರೇಂದ್ರ ಮೋದಿ ಟೀಂನ 17ನೇ ಲೋಕಸಭೆಯ ಮೊದಲ ಅಧಿವೇಶನ ಇಂದು ನಡೆಯುತ್ತೆ. ಕಾರ್ಮಿಕ ಸುಧಾರಣೆಗಳು, ತ್ರಿವಳಿ ತಲಾಖ್ ಮತ್ತು ಹೊಸ ಸರ್ಕಾರದ ಬಜೆಟ್ ಸೇರಿದಂತೆ ಹಲವು ಶಾಸನಗಳು ಜಾರಿಗೆ ಬರುವ ನಿರೀಕ್ಷೆಯಿದೆ.
ನಿನ್ನೆ ಸರ್ವಪಕ್ಷ ಸಭೆ ಹಾಗೂ ಬಿಜೆಪಿ ಸಂಸದೀಯ ಸಭೆ ನಡೆಸಿದ್ದಾರೆ. ಈ ವೇಳೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಹಾಗೂ ಸಬ್ ಕಾ ವಿಶ್ವಾಸ್ ಕುರಿತಾದ ವಿಷಯಗಳ ಬಗ್ಗೆ ಮಾತ್ನಾಡಿದ್ದು, ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನ ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಕುರಿತು ಹಾಗೂ ಅವುಗಳನ್ನ ಶಾಸನ ರೂಪದಲ್ಲಿ ತರುವ ಉತ್ಸುಕತೆಯಲ್ಲಿದೆ.