ಪತಿಯ ಪೈಶಾಚಿಕ ಕೃತ್ಯ: ಭ್ರೂಣ ಹತ್ಯೆ ಜೊತೆ ತಾಯಿಯೂ ಬಲಿ

325

ಪ್ರಜಾಸ್ತ್ರ ಸುದ್ದಿ

ಚಿಕ್ಕಬಳ್ಳಾಪುರ: ಹೆಣ್ಣೆಂಬ ಕಾರಣಕ್ಕೆ ಬಲವಂತವಾಗಿ ಭ್ರೂಣ ಹತ್ಯೆ ಮಾಡಲು ಹೋಗಿ ತಾಯಿ ಮಗು ಇಬ್ಬರು ಬಲಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮನೆಯಲ್ಲಿಯೇ ಅಬಾರ್ಷನ್ ಮಾಡಲು ಹೋಗಿ ತಾಯಿಯೂ ಮೃತ ಪಟ್ಟಿರುವ ಘಟನೆ ಬಾಗೇಪಲ್ಲಿ ತಾಲೂಕಿನ ಕೊತ್ತಪಲ್ಲಿ ಗ್ರಾಮದಲ್ಲಿ ನಡೆದಿದೆ.

2014ರಲ್ಲಿ ಸೋಮಶೇಖರ ಹಾಗೂ ಶ್ರೀಕನ್ಯಾ ಎಂಬುವರ ಮದ್ವೆಯಾಗಿದೆ. ಈ ಜೋಡಿಗೆ ಈಗಾಗ್ಲೇ ಇಬ್ಬರು ಹೆಣ್ಮಕ್ಕಳು ಇದ್ದಾರೆ. ಪತಿಯ ಕುಟುಂಬಸ್ಥರು ಗಂಡು ಮಗುಬೇಕು ಅನ್ನೋ ಕಾರಣಕ್ಕೆ 3ನೇ ಮಗು ಪಡೆಯಲು ನಿರ್ಧರಿಸಿದ್ರು. ಬಳಿಕ ಲಿಂಗ ಪರೀಕ್ಷೆ ಮಾಡಿಸಿದಾಗ ಹೆಣ್ಣು ಅನ್ನೋದು ಗೊತ್ತಾಗಿದೆ. ಹೀಗಾಗಿ ಬಲವಂತದಿಂದ ಮನೆಯಲ್ಲಿ ಅಬಾರ್ಷನ್ ಮಾಡಲು ಮುಂದಾದಾಗ ತೀವ್ರ ರಕ್ತಸ್ರಾವವಾಗಿ ಈ ಅನಾಹುತ ನಡೆದಿದೆ.

ನವೆಂಬರ್ 16ರಂದು ಈ ಘಟನೆ ನಡೆದಿದ್ದು ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಮೃತಳ ತಂದೆ ಬಾಗೇಪಲ್ಲಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಪತಿ ಸೋಮಶೇಖರ, ಆರ್ ಎಂಪಿ ಡಾಕ್ಟರ್ ಇಬ್ರಾಹಿಂ, ನರ್ಸ್ ಜಬೀಜಾಳನ್ನ ಬಂಧಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!