ತಾಲೂಕು ಆಸ್ಪತ್ರೆಯಲ್ಲಿ ಗಾಂಧಿ ಜಯಂತಿ ಆಚರಣೆ

284

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪಟ್ಟಣದ ತಾಲೂಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಆಚರಿಸಲಾಯಿತು.

ಈ ವೇಳೆ ಪ್ರಯೋಗಾಲಯ ಅಧಿಕಾರಿ ರಾಜಶೇಖರ ನರಗೋದಿಯವರು ಮಾತನಾಡಿ, ಗಾಂಧೀಜಿಯವರ ಶಾಂತಿ ಮಂತ್ರ, ಅಹಿಂಸಾ ತತ್ವವನ್ನು ನಾವು ಪಾಲಿಸಬೇಕು. ಜೊತೆಗೆ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಪ್ರಾಮಾಣಿಕತೆ ಕರ್ತವ್ಯ ನಿಷ್ಠೆ, ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ದಂತ ವೈದ್ಯಾಧಿಕಾರಿ ರಮೇಶ ರಾಠೋಡ, ಆಯುಷ್ ವೈದ್ಯಾಧಿಕಾರಿ ಮಾಂತೇಶ ಹಿರೇಮಠ ಮಾತನಾಡಿದರು. ಡಾ.ಮೌನೇಶ ಬಡಿಗೇರ ಮತ್ತು ತಾಲೂಕ ಸಾರ್ವಜನಿಕ ಆಸ್ಪತ್ರೆಯ ನೂತನ ಆಡಳಿತ ಅಧಿಕಾರಿ ಡಾ.ಮಾಗಿ ಅವರನ್ನು ಸನ್ಮಾನಿಸಲಾಯಿತು.

ಶುಶ್ರುಷಕಿ ಅಧಿಕಾರಿ ವಿದ್ಯಾ ಹಿರೇಪಟ್, ಸೂಪರ್ ಡೆಂಟ್ ಅಧಿಕಾರಿ ಟಿ.ಬಿ ಖಾಜಿ, ಎಫ್ ಡಿಸಿ ಗಳಾದ ದೇವೇಂದ್ರಪ್ಪ ಮಾಳಸಿದ್ಧ, ರಾಜೇಶ್ವರಿ ದೊಡ್ಡಮನಿ, ಹಾಗೂ ಶಾಂತು ಕುಂಬಾರ, ಜಗು ಡೋಣೂರ, ಸುರೇಶ ಪಾಟೀಲ, ಲವ ಗಾಣಿಗೇರ, ಸಾಯಣ್ಣ, ರಜಿನಿ ಸೂರ್ಯವಂಶಿ, ರಾಯಣ್ಣ ಸೊನ್ನಳ್ಳಿ, ಅಶೋಕ ಕಡಲಗೊಂಡ, ಸುರೇಶ ಪರಿಟ, ಜುಬೇರ ಗುಂದಗಿ, ಸುನಿಲ ನೇಮಶೆಟ್ಟಿ ಸೇರಿ ಅನೇಕರಿದ್ದರು. ಆಪ್ತ ಸಮಾಲೋಚಕರಾದ ಎಂಪಿ ಸಾಗರ ನಿರೂಪಿಸಿದರು.




Leave a Reply

Your email address will not be published. Required fields are marked *

error: Content is protected !!