ಪ್ರಜಾಸ್ತ್ರ ಸುದ್ದಿ
ಬೆಳಗಾವಿ: ಹಲಸಿ ಗ್ರಾಮದಲ್ಲಿನ ಬವಸೇಶ್ವರ ಸರ್ಕಲ್ ಬಳಿಯ ಧ್ವಜದ ಕಂಬದಲ್ಲಿನ ಕನ್ನಡ ಬಾವುಟ ಸುಟ್ಟು, ಅಲ್ಲಿದ್ದ ಬಸವಣ್ಣನ ಫೋಟೋಗೆ ಸೆಗಣಿ ಬಳೆದು ಅವಮಾನ ಮಾಡಿದ ಮೂವರನ್ನು ಇದೀಗ ಬಂಧಿಸಲಾಗಿದೆ. ಬೆಳಗಾವಿ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಸಚಿನ್ ಗುರವ್, ಸಂಜು ಗುರವ್ ಹಾಗೂ ಗಣೇಶ್ ಪಡ್ನೆಕರ್ ಬಂಧಿತ ಆರೋಪಿಗಳಾಗಿದ್ದಾರೆ. ಎಪಿಸಿ 153 ಎ, 295, 427 ಹಾಗೂ 120 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ರಾಯಣ್ಣನ ಪ್ರತಿಮೆ ಭಗ್ನಗೊಳಿಸದ ನಂತರ ಬಸವೇಶ್ವರ ಫೋಟೋಗೆ ಅವಮಾನ ಮಾಡಲಾಗಿತ್ತು.