ನಿನ್ನೆಯ ಮಾತಿಗೆ ಸಿ.ಎಂ ಇಬ್ರಾಹಿಂ ಇಂದು ಕ್ಷಮೆಯಾಚನೆ

222

ಪ್ರಜಾಸ್ತ್ರ ಸುದ್ದಿ

ಬೆಳಗಾವಿ: ಹಾವೇರಿಯ ಶಿಗ್ಗಾಂವನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಾತನಾಡಿ, ನಿಮ್ಮೆಲ್ಲರ ಆಶೀರ್ವಾದದಿಂದ ಸಿಎಂ ಆಗಿದ್ದೇನೆ. ಬೊಮ್ಮಾಯಿ ಶಾಶ್ವತ. ಹಿಂದಿರುವ ಪದನಾಮವಲ್ಲ. ಈ ಜೀವನವೇ ಶಾಶ್ವತವಲ್ಲ. ಎಷ್ಟು ದಿನ ಇರುತ್ತೇವೆಯೋ ಗೊತ್ತಿಲ್ಲ ಎಂದಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಸಿ.ಎಂ ಇಬ್ರಾಹಿಂ ಲೇವಡಿ ಮಾಡಿದ್ದರು. ದೋಬಿಕಾ ಗದಾ ನ ಘರ್ ಕಾ, ನ ಬಸ್ ಸ್ಟ್ಯಾಂಡ್ಕಾ ಎಂದಿದ್ದರು. ಅಲ್ದೇ ಕೇಶವಕೃಪಾ ನಂಬಿದರೆ ಚೊಂಬೆ ಗತಿ. ಜಾಗ ಖಾಲಿ ಮಾಡಬೇಕಾಗಿರುವ ಸುಳಿವು ಬೊಮ್ಮಣ್ಣನಿಗೆ ಸಿಕ್ಕಿದೆ. ಅದಕ್ಕೆ ಯಾವುದೂ ಶಾಶ್ವತವಲ್ಲವೆಂದು ಹೇಳುತ್ತಿದ್ದಾರೆ ಅಂತಾ ಕಾಲೆಳೆದಿದ್ದರು.

ಸಿ.ಎಂ ಇಬ್ರಾಹಿಂ ಮಾತಿನಿಂದ(ದೋಬಿಕಾ ಗದಾ ನ ಘರ್ ಕಾ ನ ಬಸ್ಟ್ಯಾಂಡ್ಕಾ) ಮಡಿವಾಳ ಸಮಾಜಕ್ಕೆ ಅವಮಾನ ಮಾಡಿದ್ದಾರೆ ಅನ್ನೋ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಇಂದು ಬೇಷರತ್ತಾಗಿ ಕ್ಷಮೆ ಕೇಳಿದ್ದಾರೆ. ವಿಧಾನ ಪರಿಷತ್ ಕಲಾಪ ಆರಂಭಕ್ಕೂ ಮುನ್ನ ಮಾಧ್ಯಮದವರ ಎದರು ಇಬ್ರಾಹಿಂ ಕ್ಷಮೆ ಕೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!